ನಾಯ್ಕನಕಟ್ಟೆ: ಶ್ರೀ ನರಸಿಂಹ ಭಜನಾ ಮಂಡಳಿ, ನರಸಿಂಗೆ ಮಣಿಪಾಲ ಇವರಿಂದ ಭಜನ್ ಸಂಕೀರ್ತನೆ

ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ‘ವೈಕುಂಠ ಏಕಾದಶಿ’ ಪ್ರಯುಕ್ತ ಶಿವಾನಂದ ಪ್ರಭು ನೇತೃತ್ವದಲ್ಲಿ ಶ್ರೀ ನರಸಿಂಹ ಭಜನಾ ಮಂಡಳಿ, ನರಸಿಂಗೆ ಮಣಿಪಾಲ ಇವರಿಂದ ಭಜನ್ ಸಂಕೀರ್ತನೆ ನಡೆಯಿತು. ಸಂಪತ್ ಪ್ರಭು ಹಾರ್ಮೋನಿಯಂ ಮತ್ತು ಕಿರಣ್ ಅವರು ತಬಲಾ ಸಾಥ್ ನೀಡಿದರು.

ಅರ್ಚಕ ಶ್ರೀ ಬಾಲಕೃಷ್ಣ ಭಟ್ ಅವರು ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ,ಮಹಾ ಮಂಗಳಾರತಿ ನೆರವೇರಿಸಿ ಪ್ರಸಾದ ವಿತರಿಸಿದರು. ಸೇವಾದಾರರಾದ ಚಂದ್ರಕಾಂತ ಪ್ರಭು ಮತ್ತು ಕುಟುಂಬದವರು ಅಂಬಾಗಿಲು ಉಪ್ಪುಂದ ಹಾಗೂ ಸಮಿತಿಯ ಪದಾಧಿಕಾರಿಗಳು, ಹತ್ತು ಸಮಸ್ತರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply