ಪೆರ್ಡೂರು ರಥೋತ್ಸವ: 65 ಸಾವಿರಕ್ಕೂ ಅಧಿಕ ಬಾಳೆಹಣ್ಣು ಹರಕೆ ಸಮರ್ಪಣೆ

ಹೆಬ್ರಿ: ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮನ್ಮಹಾರಥೋತ್ಸವ ವಿಜ್ರಂಭಣೆಯಿಂದ ನೆರವೇರಿತು.

ಈ ದೇವರು ‘ಕದಳಿಪ್ರಿಯ ಅನಂತಪದ್ಮನಾಭ’ ಎಂದು ಖ್ಯಾತಿ ಪಡೆದಿದ್ದು, ದೇವಸ್ಥಾನಕ್ಕೆ ಹರಕೆಯ ರೂಪದಲ್ಲಿ 65 ಸಾವಿರಕ್ಕೂ ಹೆಚ್ಚು ಬಾಳೆಹಣ್ಣು ಇಂದು ಸಮರ್ಪಣೆಯಾಗಿದೆ. ಸೇವೆಯ ನಂತರ ಹಂಚಿ ತಿನ್ನಬೇಕು, ಹೆಚ್ಚು ಬಾಳೆಹಣ್ಣು ಸೇವಿಸುವವರಿಗೆ ದೇವರ ಅನುಗ್ರಹ ಹೆಚ್ಚು ದೊರಕುತ್ತದೆ ಎಂಬ ನಂಬಿಕೆಯಿದೆ. ಶ್ರೀ ಕ್ಷೇತ್ರದಲ್ಲಿ ಮಧ್ಯಾಹ್ನದ ಅನ್ನಸಂತರ್ಪಣೆಯಲ್ಲಿ ಐದು ಸಾವಿರಕ್ಕಿಂತ ಹೆಚ್ಚು ಜನ ಭಾಗಿಯಾಗಿ, ದೇವರ ಪ್ರಸಾದ ಸ್ವೀಕರಿಸಿದರು.

 
 
 
 
 
 
 
 
 
 
 

Leave a Reply