ಸ್ಪರ್ಧಾತ್ಮಕ ಯುಗದಲ್ಲಿ ನಾವು ನೂತನ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಬೇಕು ~ಶ್ರೀಧರ್ ಶೆಟ್ಟಿಗಾರ್

ಸ್ಪರ್ಧಾತ್ಮಕ ಯುಗದಲ್ಲಿ ನಾವು ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಹೆಚ್ಚಿನ ಸೇವೆಯನ್ನು ನೀಡುವ ಮೂಲಕ ನಾವು ಪರಿಪೂರ್ಣತೆಯನ್ನು ಹೊಂದಲು ಸಾಧ್ಯ ಎಂದು ಎಸ್ ಕೆ ಪಿ ಎ ಜಿಲ್ಲಾಧ್ಯಕ್ಷ ಕರಂದಾಡಿ ಶ್ರೀಧರ್ ಶೆಟ್ಟಿಗಾರ್ ಹೇಳಿದರು.

ಅವರು ಉಡುಪಿಯ ಮಣಿಪಾಲ್ ಇನ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಖ್ಯಾತ ಛಾಯಾಚಿತ್ರಗಾರ ಗುರುದತ್ ಕಾಮತ್ ರವರ “ಕ್ಯಾಮೆರಾ ಫೌಂಡೇಷನ್ ಕಾರ್ಯಗಾರ” ವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ವೃತ್ತಿಪರ ಸಂಸ್ಥೆಯಾಗಿರುವ ನಮ್ಮ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಆಯೋಜಿಸುವ ಎಲ್ಲಾ ಕಾರ್ಯಗಾರಗಳಲ್ಲಿ ನಮ್ಮ ಸದಸ್ಯ ಮಿತ್ರರು ಭಾಗವಹಿಸಿ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಬೇಕು ಎಂದು ಕರೆ ಇತ್ತರು

 

.ಗುರುದತ್ ಕಾಮತ್ ನೂತನ ತಂತ್ರಜ್ಞಾನದ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಅಡ್ಯಾರ್ ಸ್ವಾಗತಿಸಿದರು.

ಕಾರ್ಯದರ್ಶಿಗಳಾದ ಅಜಯ್ ಮಂಗಳೂರು, ಸಂತೋಷ್ ಕಾಪು, ಉಡುಪಿ ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರ್, ಮಂಗಳೂರಿನ ವಿವೇಕ್ ಸ್ವಿಕೇರಾ ಉಪಸ್ಥಿತರಿದ್ದರು.ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಲಗಿರಿ ಧನ್ಯವಾದವಿತ್ತರು. ಶ್ರೀನಿವಾಸ ಐತಾಳ್ ಕಾಪು ನಿರೂಪಿಸಿ ದರು.

 
 
 
 
 
 
 
 
 

Leave a Reply