ಶ್ರೀಕೃಷ್ಣಮಠದಲ್ಲಿ ವಾರ್ಷಿಕ ಉದ್ವಾರ್ಚನೆ

ಪೊಡವಿಗೊಡೆಯ ಉಡುಪಿ ಶ್ರೀಕೃಷ್ಣ ಮೂರುತಿ ಬೊಳ್ಗೊಡೆ (ತಾಳೆಗರಿ ಕೊಡೆ) ಸಹಿತ ಈಚಲು ಚಾಪೆ ಧರಿಸಿ ಇಂದು ಕುಳಿತಿದ್ದಾನೆ. ದರ್ಶನಕ್ಕೆ  ಬಂದ ಭಕ್ತರಿಗೆ ತನ್ನ ಮುಖ ದರ್ಶನ ಮಾಡಿಸಲು ಒಲ್ಲ 
ಉಡುಪಿಯಲ್ಲಿ ವಾರ್ಷಿಕವಾಗಿ ನಡೆಯುವ ವಿಶಿಷ್ಟ ಸ್ವಚ್ಛತಾ ಕಾರ್ಯಕ್ರಮ. ಪರ್ಯಾಯ ಶ್ರೀಪಾದರೂ ಸೇರಿದಂತೆ ಅಷ್ಟಮಠಗಳ ಯತಿಗಳೂ ಸೇರಿ ನಡೆಸುವ ಸ್ವಚ್ಛತಾ ಕೆಲಸಗಳಿಗೆ ಉದ್ವಾರ್ಚನೆ ಎನ್ನುವರು.
ಶ್ರೀಕೃಷ್ಣಮಠದಲ್ಲಿ ವಾರ್ಷಿಕ ಉದ್ವಾರ್ಚನೆ ಶನಿವಾರದಂದು ನಡೆಯಿತು.  ಪರ್ಯಾಯ ಶ್ರೀ ಈಶಪ್ರಿಯ ತೀರ್ಥಶ್ರೀಪಾದರು, ಕೃಷ್ಣಾಪುರ ಮಠಾಧೀಶ ಶ್ರೀ  ವಿದ್ಯಾಸಾಗರ ತೀರ್ಥಶ್ರೀಪಾದರು, ಕಾಣಿಯೂರು ಮಠಾಧೀಶ  ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು.
ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಪಲಿಮಾರು ಮಠದ ಕಿರಿಯ ಪಟ್ಟ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.
 
 
 
 
 
 
 
 
 
 
 

Leave a Reply