ಉಡುಪಿ ಸಮೀಪದ ನಯಂಪಳ್ಳಿ ಕಾಶೀಮಠ ಶ್ರೀ ಗೋಪಾಲ ಕೃಷ್ಣ ದೇವಸ್ಥಾನ ಶ್ರೀದೇವರ ಪುನರ್ ಪ್ರತಿಷ್ಠಾ ವರ್ಧಂತಿಯ16 ನೇ ವರ್ಷದ ಮಹೋತ್ಸವ ಅಂಗವಾಗಿ ಸಮೂಹಿಕ ದೇವತಾ ಪ್ರಾಥನೆ, ಸಾನಿಧ್ಯ ಹವನ, ಶತ ಕಲಶಾಭಿಷೇಕ, ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ, ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ, ಮಹಾ ಪೂಜೆ ಬಳಿಕ ಸಮಾರಾಧನೆ ನೆಡೆಯಿತು.
ಅರ್ಚಕ ಶ್ರೀಜಿತ್ ಶರ್ಮಾ, ಲಕ್ಷ್ಮಣ ಭಟ್, ಗಣಪತಿ ಭಟ್, ಗಣೇಶ ಭಟ್, ಹಾಗೂ ನಯಂಪಳ್ಳಿ ಶ್ರೀ ಕಾಶೀಮಠದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶಿರಿಯಾರ ಗಣೇಶ ನಾಯಕ್ , ಕಾರ್ಯದರ್ಶಿ ಅರವಿಂದ ಭಟ್ ಮತ್ತು ಸಮಾಜ ಬಾಂದವರು ಉಪಸ್ಥಿತರಿದ್ದರು. ರಾತ್ರಿ ಹೂವಿನ ಪೂಜೆ, ವಸಂತ ಪೂಜೆ, ಅಷ್ಟಾವಧಾನ ಸೇವೆ , ಪಲ್ಲಕಿ ಉತ್ಸವ, ಬಳಿಕ ಪ್ರಸಾದ ವಿತರಣೆ ನೆಡೆಯಿತು