ಜ. 6ರಿಂದ ದೇವರನಾಮ ಉಚಿತ ಕಲಿಕಾ ಶಿಬಿರ

ಶ್ರೀ ಪುರಂದರ ದಾಸರ ಮತ್ತು ಶ್ರೀ ತ್ಯಾಗರಾಜ ಸ್ವಾಮಿಗಳ ಆರಾಧನೆಯ ಪ್ರಯುಕ್ತ ಬೆಂಗಳೂರು ನಗರದ ಪ್ರತಿಷ್ಠಿತ ಸಂಸ್ಥೆ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯವು 24ನೇ ವರ್ಷದ “ದೇವರನಾಮ ಉಚಿತ ಕಲಿಕಾ ಶಿಬಿರ” ಆಯೋಜಿಸಿದೆ. 

ಎಲ್ಲಾ ವಯೋಮಾನದ ಮಹಿಳೆ ಮತ್ತು ಪುರುಷರು ಶಿಬಿರದಲ್ಲಿ ಭಾಗವಹಿಸಬಹುದು.

ಜನವರಿ 6ರಿಂದ 25ರವರೆಗೆ ಪ್ರತೀದಿನ ಸಂಜೆ 5.30ರಿಂದ 6.30ರವರೆಗೆ ಬನಶಂಕರಿ ೧ ನೇ ಹಂತದ (ಪಿ ಇ ಎಸ್ ಡಿಗ್ರಿ ಕಾಲೇಜು ಹಿಂಭಾಗದ) ಸ್ವಾಮಿ ವಿವೇಕಾನಂದ ವಿದ್ಯಾಶಾಲೆ ಆವರಣದಲ್ಲಿ ಶಿಬಿರ ನಡೆಯಲಿದೆ ಎಂದು ಪ್ರಾಚಾರ್ಯ ವಿದ್ವಾನ್ ಜೆ.ಎಸ್. ಶ್ರೀ ಕಂಠ ಭಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೆಸರು ನೋಂದಣಿಗೆ 9448533347 ಅಥವಾ 8861213567 ಸಂಪರ್ಕಿಸಬಹುದು.

 
 
 
 
 
 
 
 
 
 
 

Leave a Reply