ನಾಯ್ಕನಕಟ್ಟೆ: ಝೇಂಕಾರ್ ಬಳಗ ಉಡುಪಿ ಇವರಿಂದ ‘ಭಕ್ತಿ ಸುಧೆ’

ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ‘ಅಮಲಕಿ ಏಕಾದಶಿ’ಪ್ರಯುಕ್ತ ಸಂಪ್ರೀತ್ ಶೆಣೈ  ಇವರ ನೇತೃತ್ವದಲ್ಲಿ ‘ಭಕ್ತಿ ಸುಧೆ’ ಭಜನೆ ಕಾರ್ಯಕ್ರಮ ನಡೆಯಿತು.ಅರ್ಚಕ ಶ್ರೀ ಬಾಲಕೃಷ್ಣ ಭಟ್ ಅವರು ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ,ಮಹಾ ಮಂಗಳಾರತಿ ನೆರವೇರಿಸಿ ಪ್ರಸಾದ ವಿತರಿಸಿದರು.ಸೇವಾದಾರರಾದ ಅರ್ಚಕ ಕುಟುಂಬದ ದಿವಂಗತ ವೇ.ಮೂ.ವಾಸುದೇವ ಭಟ್ ಸ್ಮರಣಾರ್ಥ ಅವರ ಮಕ್ಕಳು ಮೊಮ್ಮಕ್ಕಳು ಹಾಗೂ ಸಮಿತಿಯ ಪದಾಧಿಕಾರಿಗಳು, ಹತ್ತು ಸಮಸ್ತರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply