ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಬಳಿ ಬಂದು ಕ್ಷಮೆಯಾಚಿಸಿದ ಆಲ್ಬರ್ಟ್ ಫೆರ್ನಾಂಡಿಸ್

​​ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬಗ್ಗೆ ಅವಹೇಳನ ಮಾಡಿದ ವ್ಯಕ್ತಿಯೋರ್ವ ಕಟೀಲು ಕ್ಷೇತ್ರಕ್ಕೆ ಬಂದು ತಪ್ಪೊಪ್ಪಿಕೊಂಡ ಘಟನೆ ನಡೆದಿದ್ದು, ದೇವರ ಶಕ್ತಿ ಮತ್ತೆ ಜಗಜ್ಜಾಹೀರಾಗಿದೆ. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಆಲ್ಬರ್ಟ್ ಫೆರ್ನಾಂಡಿಸ್ ಎಂಬವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಬಗ್ಗೆ ಅಶ್ಲೀಲ ಪದ ಬಳಸಿ ದಿನೇಶ್‌ ಎಂಬುವವರಿಗೆ ವಾಯ್ಸ್‌ ಸಂದೇಶ ಕಳುಹಿಸಿದ್ದರು.
ಮೂಲತಃ ಬಜ್ಪೆ ನಿವಾಸಿಯಾಗಿರುವ ಇವರು ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದು, ಈ ವಿಚಾರವಾಗಿ ಬಜ್ಪೆ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಇದೀಗ ಈ ವ್ಯಕ್ತಿಗೆ ತಾನು ಮಾಡಿದ ತಪ್ಪು ಅರಿವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಬಂದು ತಾನು ಮಾಡಿರುವುದು ತಪ್ಪೆಂದು ಕಣ್ಣೀರಿಟ್ಟು ಕ್ಷಮೆಯಾಚಿಸಿ ಜೈಲಿಗೆ ಹಾಕಬೇಡಿ ಎಂದು ಗೋಗರೆದಿದ್ದಾರೆ. 
ಅವರ ಇಳಿ ವಯಸ್ಸಿನ ಕಾರಣಕ್ಕಾಗಿ ಬಜ್ಪೆ ಠಾಣೆಯಲ್ಲಿ ಪರಸ್ಪರ ಪಂಚಾತಿಕೆಯಲ್ಲಿ ಇತ್ಯರ್ಥಗೊಳಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಸಂಘಟನೆಯ ಪ್ರಮುಖರು ಕಾರ್ಯಕರ್ತರು ಹಾಗೂ ಬಿಜೆಪಿ ನಾಯಕರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply