ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣಗುಡ್ಡೆಗೆ ಮುಂಬಯಿ ಮೀರಾರೋಡ್ ನ ಮಂಡಲ್ ಸಭಾಪತಿ (ಬಿಎಂಸಿ )ಮನೋಜ್ ದುಬೆ,  ಬಿಜೆಪಿ ಪ್ರಮುಖ ರಾಮ್ ನಾರಾಯಣ್ ದುಬೆ ಹಾಗೂ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ರಾಧಾ ರಾಜೇಂದ್ರ ನಾಡರ್ ಕುಟುಂಬ ಸಮೇತವಾಗಿ ಆಗಮಿಸಿ  ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ  ಶ್ರೀ ರಮಾನಂದ ಗುರೂಜಿಯವರ ಆಶೀರ್ವಾದವನ್ನು ಪಡೆದರು. 
ಕಾರ್ಯಕ್ರಮವು ಶ್ರೀ ರಮಾನಂದ ಗುರೂಜೀ ಅವರ ಉಪಸ್ಥಿತಿಯಲ್ಲಿ,  ಶ್ರೀಯುತ ಕೃಷ್ಣಮೂರ್ತಿ ತಂತ್ರಿಗಳ ನೇತತ್ವದಲ್ಲಿ ನೆರವೇರಿತು. 
ಶ್ರೀಮತಿ ಕುಸುಮ ನಾಗರಾಜ್ , ಪ್ರಜಾ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲೆ ಉಷಾ ರಮಾನಂದ,  ಆನಂದ ಬಾಯಿರಿ,  ಸ್ವಸ್ತಿಕ್ ಆಚಾರ್ಯ ಆಚಾರ್ಯ ಉಪಸ್ಥಿತರಿದ್ದರು.   
ದುರ್ಗಾ ಆದಿಶಕ್ತಿ ಮಾತಗೆ ವಿಶೇಷ ಪೂಜೆಯನ್ನು ಗಜಾನನ ಬಟ್ ಶಿರಸಿ ನೆರವೇರಿಸಿದರು. 
 
 
 
 
 
 
 
 
 
 
 

Leave a Reply