ಪೋಲಿಸರೊಂದಿಗೆ ಲಾಠಿ ಹಿಡಿದು ಬಂದ ಗ್ರಾಂ.ಪಂ ಅಧ್ಯಕ್ಷೆ

ಮಡಿಕೇರಿ : ರಾಜ್ಯರಲ್ಲಿ ಲಾಕ್‍ಡೌನ್ ಜಾರಿಯಾಗಿ ಇಂದಿಗೆ ಆರು ದಿನವಾದರೂ ಅನಗತ್ಯ ಓಡಾಟ, ವಸ್ತುಗಳ ಖರೀದಿಗೆ ಜನರು ನೂಕು ನುಗ್ಗಲು ಇನ್ನು ಮುಂದುವರಿಸಿದ್ದಾರೆ.

ಇಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಪಟ್ಟಣದಲ್ಲಿ ಜನರು ಅಗತ್ಯ ವಸ್ತುಗಳ ಖರೀದಿ ಹೆಸರಿನಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದರು. ದಿನಸಿ ಅಂಗಡಿಗಳಲ್ಲಿ ಹಾಗೂ ತರಕಾರಿ ಅಂಗಡಿಗಳಲ್ಲಿ ಜನರು ಅಗತ್ಯ ವಸ್ತುಗಳನ್ನು ತಗೆದುಕೊಳ್ಳಲು ಮುಗಿ ಬೀಳುತ್ತಿದ್ದರು.

ಪೋಲಿಸರು ಜನರಿಗೆ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ವಸ್ತುಗಳನ್ನು ತೆಗೆದುಕೊಳ್ಳಿ ಎಂದು ಎಷ್ಟೇ ಮನವರಿಕೆ ಮಾಡಿದರೂ ಜನ ಮಾತ್ರ ಇದಕ್ಕೆಲ್ಲ ಕ್ಯಾರೇ ಎನ್ನದೆ, ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.

 ಇದನ್ನು ಕಂಡ ಸಿದ್ದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ರೀನಾ ಅವರು ಜನರಿಗೆ ಎಷ್ಟೇ ಹೇಳಿದರೂ ಅವರಿಗೆ ಅರ್ಥ ಅಗೋದಿಲ್ಲ ಎಂದು ನೂಕು ನುಗ್ಗಲು ಮಾಡುತ್ತಿದ್ದ ಸ್ಥಳಕ್ಕೆ ಪೋಲಿಸರೊಂದಿಗೆ ಲಾಠಿ ಹಿಡಿದು ತಾವೇ ಫೀಲ್ಡಿಗಿಳಿದರು.ರೀನಾ ಅವರು ಜನರನ್ನು ಕಂಟ್ರೋಲ್ ಮಾಡಿ ಜನರನ್ನು ಸಾಲಿನಲ್ಲಿ ನಿಲ್ಲಿಸಿ, ಕೊರೊನಾ ಮಹಾಮಾರಿ ಬಗ್ಗೆ ಜನರೇ ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದೆ. ಜನ ಸಾಮಾನ್ಯರು ಅದನ್ನು ಅರ್ಥ ಮಾಡಿಕೊಳ್ಳಬೇಕು. ಪೋಲಿಸರು ಹಾಗೂ ಜಿಲ್ಲಾಡಳಿತಕ್ಕೆ ಸಹಕಾರ ಮಾಡಬೇಕು ಎಂದು ಜನರಿಗೆ ಬುದ್ದಿ ಮಾತು ಹೇಳಿದರು. ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಿ ಮನೆಗೆ ತೆರಳುವಂತೆ ಮನವಿ ಮಾಡಿಕೊಂಡರು.

 
 
 
 
 
 
 
 
 
 
 

Leave a Reply