ಉಡುಪಿ: ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷದಲ್ಲಿ ಶಾಲೆ ನಡೆದ ದಿನಗಳೇ ಕಡಿಮೆ. ಕರೋನಾ ರೋಗದ ಸೋಂಕು ವಿಪರೀತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾಧ್ಯಂತ ಲಾಕ್ಡೌನ್ ಎದುರಿಸಲಾಗುತ್ತಿದೆ. ಈಗ ಮನೆಯಲ್ಲಿರುವ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಕಲಿಕಾ ನಿರಂತರತೆ ಸಾಧಿಸಲು ಶಾಲಾ ಹಂತದಲ್ಲಿ ಶಿಕ್ಷಕರು ಒಂದಿಲ್ಲೊಂದು ಕಾರ್ಯವನ್ನು ಆನ್ಲೈನ್ ಮೂಲಕ ಸಂಪರ್ಕ ಮಾಡುತ್ತಿದ್ದು, ವಿದ್ಯಾರ್ಥಿಗಳು ಪದೇ ಪದೇ ಶಾಲೆಯ ಶಿಕ್ಷಕರಿಗೆ ದೂರವಾಣಿ ಮೂಲಕ ತಮ್ಮ ಕಲಿಕಾ ಸಮಸ್ಯೆಗಳನ್ನು ಪರಿಹಸಿಕೊಳ್ಳುವಲ್ಲಿ ಹಿಂಜರಿಕೆ ಆಗುತ್ತಿರುವುದು ತಿಳಿದು ಬಂದಿದೆ.
ಆದ್ದರಿಂದ ವಿಷಯವಾರು ಕೆಳಗಿನ ಸಂಪನ್ಮೂಲ ವ್ಯಕ್ತಿಗಳಿಗೆ , ಜಿಲ್ಲೆಯ ಯಾವುದೇ ಪ್ರೌಢ ಶಾಲೆಯ ವಿದ್ಯಾರ್ಥಿಗಳು ತಾವು ಓದುವ ಸಮಯದಲ್ಲಿ ತಮಗೆ ಎದುರಾಗುವ ಕಲಿಕಾ ಸಮಸ್ಯೆಗೆ ಸಂಬಂಧಿಸಿದ ವಿಷಯಕ್ಕೆ ಅನುಗುಣವಾಗಿ ವಿಷಯ ಸಂಪನ್ಮೂಲ ಶಿಕ್ಷಕರಿಗೆ ಕರೆ ಮಾಡಿ ತಮ್ಮ ಕಲಿಕಾ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಎಲ್ಲ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳು ಕೇಳುವ ವಿಷಯವಾರು ಪ್ರಶ್ನೆಗಳಿಗೆ ಯಾವುದೇ ಸಮಯದಲ್ಲಿ ಉತ್ತರಿಸಲಿದ್ದಾರೆ.
ಈ ಕಾರ್ಯಕ್ರಮದ ಲಾಭವನ್ನು ಜಿಲ್ಲೆಯ ಎಲ್ಲ ಎಸ್.ಎಸ್.ಎಲ್.ಸಿ. ವಿದಾರ್ಥಿಗಳು ಪಡೆದುಕೊಳ್ಳಲು ತಿಳಿಸಿದೆ. (ಸಮಯ ಪ್ರತಿ ದಿನ ಸಂಜೆ 4.00 ರಿಂದ ಸಂಜೆ 8.00 ರವರೆಗೆ) ವಿಷಯವಾರು ಸಂಪನ್ಮೂಲ ವ್ಯಕ್ತಿಗಳ ವಿವರ ಇಂತಿವೆ:
ಸಮಾಜ ವಿಜ್ಞಾನ: ಶೇಖರ ಭೋವಿ-9481391219, ಮಹಾಬಲೇಶ್ವರ-86184 78154, ಶ್ರೀಲತಾ ಶೆಟ್ಟಿ-9480219637, ಪ್ರದೀಪ್ ಕುಮಾರ-9844676957, ಸಂತೋಷ್-9901918126, ಜ್ಯೋತಿ ಕೆ.-8722375726 ನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.