ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲೆ ಘಟಕ ವತಿಯಿಂದ ಕುಂದಾಪುರ, ತಲ್ಲೂರು, ಗಂಗೊಳ್ಳಿ, ಅಂಪಾರು, ನೆಲ್ಲಿಕಟ್ಟೆ ಪರಿಸರದ 7 ಮನೆಗಳಿಗೆ ಅಡುಗೆ ಪಾತ್ರೆಗಳ ಕಿಟ್, ಟಾರ್ಪಲ್, ಬಕೇಟ್ ಮತ್ತು ಸೋಪ್, ಮಾಸ್ಕ ವಿತರಣೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಡಾ ತಲ್ಲೂರು ಶಿವರಾಮ ಶೆಟ್ಟಿ ಯವರು ಫಲಾನುಭವಿಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗೌರವ ಕಾರ್ಯದರ್ಶಿ ಕೆ ಜಯರಾಮ್ ಆಚಾರ್ಯ, ಸಾಲಿಗ್ರಾಮ, ಡಿ ಡಿ ಆರ್ ಸಿ ಕಾರ್ಯದರ್ಶಿ ಕೆ.ಸನ್ಮತ್ ಹೆಗ್ಡೆ, ಡಿಡಿಆರ್ ಸಿ ಸಿಬ್ಬಂದಿ ಅನುಷಾ ಆಚಾರ್, ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಸಂಸ್ಥೆಯ ಕಾರ್ಯದರ್ಶಿ ಹಾಗೂ ರಕ್ತದಾನಿಗಳ ಬಳಗ ಕುಂದಾಪುರ ಸಂಸ್ಥೆಯ ಅಧ್ಯಕ್ಷರಾದ ಗುರುಪ್ರಸಾದ್ ಖಾರ್ವಿ ಹಾಗೂ ಸುಕೇಶ್ ನಾಯ್ಕ್, ರಜತ್ ಖಾರ್ವಿ, ಕುಂದಾಪುರ ಪುರಸಭಾ ಸದಸ್ಯರಾದ ರಾಘವೇಂದ್ರ ಖಾರ್ವಿ, ದಯಾನಂದ ಖಾರ್ವಿಯವರು ಉಪಸ್ಥಿತರಿದ್ದರು.