ಕರಾವಳಿ ಎಕ್ಸ್‌ಪ್ರೆಸ್‌ ಡಾಟ್ ಕಾಮ್ ಮುಕುಟಕ್ಕೊಂದು ಗರಿ ..

ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ತಮ್ಮನ್ನು ಬದಲಿಸಿಕೊಳ್ಳುತ್ತಾ, ಇಂದಿನ ದಿನಗಳಲ್ಲಿ ತಮ್ಮ ಕೈಬೆರಳಲ್ಲೇ ವಿಶ್ವ ದರ್ಶನದ ಅನುಭವ ತರುವ ಡಿಜಿಟಲ್ ಮಾಧ್ಯಮದಲ್ಲಿ ತನ್ನದೇ ಛಾಪು ಮೂಡಿಸಿದ ವೆಬ್ ಲೋಕ “ಕರಾವಳಿ ಎಕ್ಸ್‌ಪ್ರೆಸ್‌ ಡಾಟ್ ಕಾಮ್”.ಹೊಸತನಕ್ಕೆ ನಾಂದಿ ಹಾಡುತ್ತಾ ದಾಪುಗಾಲು ಹಾಕುತ್ತಿರುವ ಕರಾವಳಿ ಎಕ್ಸ್‌ಪ್ರೆಸ್‌ ಏಳು ಲಕ್ಷಕ್ಕೂ ಅಧಿಕ ಓದುಗರನ್ನು ಸಂಪಾದಿಸಿ ಆ ಮೂಲಕ ಡಿಜಿಟಲ್ ಯುಗದಲ್ಲಿ ಸೈ ಎನಿಸಿಕೊಂಡಿದೆ.

ಈ ವೆಬ್ ಸೈಟ್ ನ ಸಂವಹನವನ್ನು ಕಂಡು “ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ’ ಉಡುಪಿ ಮಣಿಪಾಲ ಸಂಸ್ಥೆಯು ವಿಶ್ವ ಸಂವಹನಕಾರರ ದಿನದ ಅಂಗವಾಗಿ “ಕರಾವಳಿ ಇ – ಧ್ವನಿ .” ಪುರಸ್ಕಾರ ನೀಡಿ ಗೌರವಿಸಿದೆ.

ಈ ಪುರಸ್ಕಾರವನ್ನು “ಕರಾವಳಿ ಎಕ್ಸ್‌ಪ್ರೆಸ್‌ ಡಾಟ್ ಕಾಮ್” ಪ್ರವರ್ತಕ ಜನಾರ್ದನ್ ಕೊಡವೂರ್ ರವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವ ರಾಜ್, ಪಿ ಆರ್ ಸಿ ಐ ,ಉಡುಪಿ ಜಿಲ್ಲಾಅಧ್ಯಕ್ಷ ಮರವಂತೆ ನಾಗರಾಜ ಹೆಬ್ಬಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಕೆ.ಜಯಪ್ರಕಾಶ್ ರಾವ್, ಉದ್ಯಮಿ ಸುಭಾಶ್ಚಂದ್ರ ಹೆಗ್ಡೆ , ತನುಜಾ ಮಾಬೆನ್, ಪೂರ್ಣಿಮಾ ಜನಾರ್ದನ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಕರ್ವಾಲ್ ರಾಘವೇಂದ್ರ ಪ್ರಭು ಧನ್ಯವಾದವಿತ್ತು ರವಿರಾಜ್ ಹೆಚ್ ಪಿ ಪರಿಚಯಿಸಿದರು. ರಾಜೇಶ್ ಭಟ್ ಪಣಿಯಾಡಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply