ಪುತ್ತೂರು ಬ್ರಾಹ್ಮಣ ಮಹಾಸಭಾ- ತುಳಸೀ ಸಂಕೀರ್ತನೆ ಸ್ಪರ್ಧೆ

ಬ್ರಾಹ್ಮಣ ಮಹಾಸಭಾ ಪುತ್ತೂರು ಇದರ ತುಳಸಿ ಸಂಕೀರ್ತನ ಬಳಗದ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ 12.11.2022 ಶನಿವಾರ ಮತ್ತು 13 .11.2022 ಭಾನುವಾರ ಪುತ್ತೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಗ್ರಹದಲ್ಲಿ ವಿಪ್ರ ತಂಡಗಳ ತುಳಸೀ ಸಂಕೀರ್ತನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯು ಪುರುಷ,ಮಹಿಳಾ ಹಾಗೂ ಮಕ್ಕಳ ವಿಭಾಗದಲ್ಲಿ ಜರಗಲಿದ್ದು ಪರಿಸರದ ಸುಮಾರು 20 ಸಂಕೀರ್ತನ ತಂಡಗಳು ಭಾಗವಹಿಸಲಿದೆ ಎಂದು ತುಳಸೀ ಸಂಕೀರ್ತನ ಬಳಗದ ಸಂಚಾಲಕರಾದ ಶ್ರೀ ಚೈತನ್ಯ ಎಂ.ಜಿ. ಮತ್ತು ಅಧ್ಯಕ್ಷರಾದ ಶ್ರೀ ದುರ್ಗಾ ಪ್ರಸಾದ್ ಭಾರ್ಗವ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply