ಅರ್ಥಶಾಸ್ತ್ರ ಪಠ್ಯಪುಸ್ತಕಗಳ ಬಿಡುಗಡೆ

ಪೂರ್ಣಪ್ರಜ್ಞ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸೌಜನ್ಯ ಎಸ್ ಶೆಟ್ಟಿ ಮತ್ತು ಡಾ. ಪ್ರಕಾಶ್ ರಾವ್ ಇವರು ಬರೆದ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಗಳ ಕಂಟೆoಪೊರರಿ ಇಂಡಿಯನ್ ಇಕಾನಾಮಿ ಮತ್ತು ಇಂಟರ್‌ನಾಶನಲ್ ಇಕಾನಾಮಿಕ್ಸ ಎಂಬ ಪಠ್ಯಪುಸ್ತಕಗಳನ್ನು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಪರಮ ಪೂಜ್ಯ ಶ್ರೀ ಶ್ರೀ ಈಶ ಪ್ರಿಯ ತೀರ್ಥ ಶ್ರೀಪಾದರು ಲೋಕಾರ್ಪಣ ಗೊಳಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಜಿ ಎಸ್ ಚಂದ್ರಶೇಖರ್, ಕೋಶಾಧಿಕಾರಿ ಸಿ ಎ ಪ್ರಶಾಂತ್ ಹೊಳ್ಳ, ಪ್ರಾಂಶುಪಾಲರಾದ ಡಾ ರಾಘವೇಂದ್ರ ಎ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಮೇಶ್ ಟಿ ಎಸ್ ಹಾಗೂ ಲೇಖಕರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply