ಹುತಾತ್ಮ ಸೇನಾಧಿಕಾರಿಗಳಿಗೆ ಶ್ರದ್ದಾಂಜಲಿ ಸಮರ್ಪಣಾ ಕಾರ್ಯಕ್ರಮ

ಹಿರಿಯಡ್ಕ : ಹಿಂದೂ ಯುವಸೇನೆ ಹಿರಿಯಡ್ಕ ಶಾಖೆ ವತಿಯಿಂದ ಡಿ.8 ರಂದು ಹೆಲಿಕಾಪ್ಟರ್ ಪತನದಿಂದ ಹುತಾತ್ಮರಾದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತವರ ಧರ್ಮಪತ್ನಿ ಹಾಗೂ 11 ಮಂದಿ ಸೇನಾಧಿಕಾರಿಗಳಿಗೆ ಶ್ರದ್ದಾಂಜಲಿ ಸಮರ್ಪಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಭಾಗವಹಿಸಿ ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಹಿಂದು ಯುವಸೇನೆ ಹಿರಿಯಡ್ಕ ಅಧ್ಯಕ್ಷ ಶೇಖರ್ ಶೆಟ್ಟಿ ಹಿರಿಯಡ್ಕ,ಹಿಂದೂ ಜಾಗರಣವೇದಿಕೆ ಮಂಗಳೂರು ಪ್ರಮುಖ್ ಪ್ರಕಾಶ್ ಕುಕ್ಕೆಹಳ್ಳಿ.ಡಾ. ಲಕ್ಷ್ಮೀನಾರಾಯಣ ಉಪಾಧ್ಯಾಯ,ಶಕ್ತಿಪ್ರಸಾದ್ ಶೆಣೈ,ಹಿಂದುಯುವಸೇನೆ ಉಡುಪಿ ಪ್ರಧಾನಕಾರ್ಯದರ್ಶಿ ಉದಯ್ ಕುಮಾರ್ ಹಿರಿಯಡ್ಕ,ಹಾಗು ಹಿಂದೂ ಯುವಸೇನೆ ಹಿರಿಯಡ್ಕ ಪ್ರಮುಖರಾದ ಸನತ್ ಶೆಟ್ಟಿ,ಅಶೋಕ್ ಶೆಟ್ಟಿ,ವಿನಯ್ ಅಂಜಾರು, ಸುನಿಲ್ ಶೆಟ್ಟಿ,ಹರೀಶ್ ಎಂಪಿ ಎಲ್, ಮಾಂಬೆಟ್ಟು, ಕೃಷ್ಣಾದಾಸ್ ಕೊಂಡಾಡಿ,ರೋಹಿತ್ ಶೆಟ್ಟಿ,ಸದಾನಂದ್ ಪೂಜಾರಿ ಬೆಳ್ಳರ್ಪಾಡಿ,ಸದಾನಂದ ಕಾಮತ್,ಸುನಿತಾ ನಾಯ್ಕ್,ಮಮತಾ ನಾಯಕ್ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದರು.

 
 
 
 
 
 
 
 
 
 
 

Leave a Reply