ಆರೋಗ್ಯಕ್ಕಾಗಿ ಸೈಕ್ಲಿಂಗ್ ಬೃಹತ್ ಜಾಥಾ

ಉಡುಪಿ :- ವೈದ್ಯಕೀಯ ಪ್ರಕೋಷ್ಠ ಉಡುಪಿ ಜಿಲ್ಲೆ, ಅಮೋಘ ಹಿರಿಯಡಕ, ಹೆಚ್.ಡಿ.ಎಫ್.ಸಿ ಬ್ಯಾಂಕ್ ಮಣಿಪಾಲ ಶಾಖೆ ಮತ್ತು ವಸಂತಿ ಎ ಪೈ ಪ್ರತಿಷ್ಟಾನ ಮಣಿಪಾಲ ಇದರ ಜಂಟಿ ಆಶ್ರಯದಲ್ಲಿ ಆರೋಗ್ಯಕ್ಕಾಗಿ ಸೈಕ್ಲಿಂಗ್ ಬೃಹತ್ ಜಾಥಾ ಕಾಯ೯ಕ್ರಮ ಡಿ.12 ಆದಿತ್ಯವಾರ ಸಿಂಡಿಕೇಟ್ ಸಕ೯ಲ್ ಬಳಿ ನಡೆಯಿತು.
ಕಾಯ೯ಕ್ರಮವನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಉದ್ಘಾಟಿಸಿ ಶುಭ ಹಾರೈಸಿದರು.  ಮಣಿಪಾಲದಿಂದ ಮಲ್ಪೆ ಬೀಚ್ ವರೆಗೆ ನಡೆದ ಈ ಸೈಕ್ಲಿಂಗ್ ನಲ್ಲಿ ನೂರಾರು ಜನರು ಭಾಗವಹಿಸಿದ್ದು, ಫಿಟ್ ಇಂಡಿಯಾ ಗಾಗಿ ಆರೋಗ್ಯದ ಬಗ್ಗೆ ವಿವಿಧ ಭಿತ್ತಿಪತ್ರಿಕೆಗಳು ಗಮನ ಸೆಳೆದವು.
ಈ ಸಂದಭ೯ದಲ್ಲಿ ಮಲ್ಪೆ ಬೀಚ್ ನಲ್ಲಿ ಸ್ವಚ್ಚತಾ ಅಭಿಯಾನ ಹಾಗೂ ಆರೋಗ್ಯದ ಕುರಿತು ರಸಪ್ರಶ್ನೆ ಕಾಯ೯ಕ್ರಮ ನಡೆಸಲಾಯಿತು.
ಕಾಯ೯ಕ್ರಮದಲ್ಲಿ ವೈದ್ಯಕೀಯ ಪ್ರಕೋಷ್ಠ ಸಂಚಾಲಕ ಡಾ| ರಾಮಚಂದ್ರ ಕಾಮತ್, ಸಹ ಸಂಚಾಲಕ ಡಾ| ವಿದ್ಯಾಧರ ಶೆಟ್ಟಿ, ಗಣೀಶ್ ನಾಯಕ್, ಸೆಲ್ಕೋ ಸೋಲಾರ್ ಡಿಜಿಎಂ ಜಗದೀಶ್ ಪೈ, ಅಮೋಘ ಸಂಚಾಲಕಿ ಪೂಣಿ೯ಮಾ ಸುರೇಶ್, ಉದಯ ಕುಮಾರ್, ಸುನಾಗ್ ಆಸ್ಪತ್ರೆಯ ಡಾ| ನರೇಂದ್ರ ಕುಮಾರ್ ಹೆಚ್.ಎಸ್, ಡಾ|ವೀಣಾ ನರೇಂದ್ರ , ಡಾII ರವೀಂದ್ರ , ಮಾಜಿ ತಾ.ಪಂ ಸದಸ್ಯ ಸತ್ಯಾನಂದ ನಾಯಕ್, ಅನಿಲ್ ಶೆಟ್ಟಿ, ರಾಘವೇಂದ್ರ ಪ್ರಭು, ಕವಾ೯ಲು , ಮುಂತಾದವರಿದ್ದರು.
.ಪ್ರೋ.ಮೇ.ರಾಧಾಕೃಷ್ಣ ನಿರೂಪಿಸಿದರು. ಈ ಜಾಥಾ ಕಾಯ೯ಕ್ರಮ ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಡೆಗಳಲ್ಲಿ ನಡೆಸಲಾಗುವುದು ಎಂದು ಸಂಘಟಕರಾದ ಡಾ| ರಾಮಚಂದ್ರ ಕಾಮತ್ ತಿಳಿಸಿದರು. ಭಾಗವಹಿಸಿದ ಅಭ್ಯಥಿ೯ಗಳಿಗೆ ಪ್ರಮಾಣ ಪತ್ರ ಮತ್ತು ಟೀ.ಶಟ್೯ ನೀಡಲಾಯಿತು
 
 
 
 
 
 
 
 
 

Leave a Reply