ಸ್ವ ಉದ್ಯೋಗಕ್ಕಾಗಿ ಆರು ದ್ವಿಚಕ್ರ ವಾಹನ ವಿತರಿಸಿದ ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್

ಉಡುಪಿ : ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಈ ವರ್ಷ ಸಂಗ್ರಹಿಸಿದ ಝಕಾತ್ ಮೊತ್ತದಿಂದ ಬಡ ಫಲಾನುಭವಿಗಳಿಗೆ ಸ್ವ ಉದ್ಯೋಗಕ್ಕಾಗಿ ಆರು ದ್ವಿಚಕ್ರ ವಾಹನ ವಿತರಿಸುವ ಕಾರ್ಯಕ್ರಮವನ್ನು ಶುಕ್ರವಾರ ಉಡುಪಿ ಜಾಮೀಯ ಮಸೀದಿ ವಠಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಫೇಮಸ್ ಗ್ರೂಪ್ನ ರಿಯಾಜ್ ಅಹ್ಮದ್ ಫಲಾನು ಭವಿಗಳಾದ ಅಬ್ದುಲ್ ಅಜೀಜ್ ಹೊನ್ನಾಳ, ನಯಾಜ್ ಹೊನ್ನಾಳ, ಅಬೂಬಕ್ಕರ್ ಕೊಂಬಗುಡ್ಡೆ, ಯೂನಿಸ್ ಖಾನ್ ಫಕೀರ್ಣಕಟ್ಟೆ, ನಿಸಾರ್ ಸಾಸ್ತಾನ, ಮುಹಮ್ಮದ್ ಶರೀಫ್ ಫಣಿಯೂರಿಗೆ ದ್ವಿಚಕ್ರ ವಾಹನಗಳ ಕೀಲಿ ಕೈಯನ್ನು ವಿತರಿಸಿದರು.

 ಸಂಸ್ಥೆಯ ಅಧ್ಯಕ್ಷ ಕಲ್ಯಾಣಪುರ ಅಬ್ದುಲ್ ಗಫೂರ್ ಅಧ್ಯಕ್ಷತೆ ವಹಿಸಿದ್ದರು. ಮಸೀದಿಯ ಇಮಾಮ್ ವೌಲಾನ ರಶೀದ್ ಅಹ್ಮದ್ ನದ್ವಿ ಮಾತನಾಡಿದರು. ವೌಝಿನ್ ಹಫೀಝ್ ಯುನೂಸ್ ಕುರಾನ್ ಪಠಿಸಿದರು. 

ಸಂಸ್ಥೆಯ ಮಾಜಿ ಅಧ್ಯಕ್ಷ ವಿ.ಎಸ್.ಉಮರ್ ಸ್ವಾಗತಿಸಿದರು. ಗಫೂರ್ ಆದಿ ಉಡುಪಿ ವಂದಿಸಿ, ಸದಸ್ಯ ಇಕ್ಬಾಲ್ ಮನ್ನಾ ನಿರೂಪಿಸಿದರು. 

ಕಾರ್ಯದರ್ಶಿ ಯು.ಇಬ್ರಾಹಿಂ, ಸದಸ್ಯರಾದ ಫಯಾಜ್, ಖಾಲಿದ್, ಮುನೀರ್, ಮುಹಮ್ಮದ್ ಶಮೀಮ್, ಫರ್ವೇಜ್, ಅರ್ಶಾದ್, ಮುಹಮ್ಮದ್ ವೌಲಾ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply