ಲಯನ್ಸ್ ಮತ್ತು ಲಿಯೋ ಕ್ಲಬ್ ಬ್ರಹ್ಮಗಿರಿ ಪದಪ್ರದಾನ

ಲಯನ್ಸ್ ಮತ್ತು ಲಿಯೋ ಕ್ಲಬ್ ಬ್ರಹ್ಮಗಿರಿಯ ಪದಪ್ರದಾನ ಕಾರ್ಯಕ್ರಮ ಅಜ್ಜರಕಾಡು ಟೌನ್ ಹಾಲ್ ನಲ್ಲಿ ಜರಗಿತು.

ಪದಪ್ರದಾನ ಅಧಿಕಾರಿಯಾಗಿ ಎರಡನೇ ಉಪಜಿಲ್ಲಾ ಗರ್ವನರ್ ಪಿ.ಯಂ.ಜೆ.ಎಫ್ ಲಯನ್ ಸ್ವಪ್ನ ಸುರೇಶ್ ಅವರು 2023-24ನೇ ಸಾಲಿನ ಅಧ್ಯಕ್ಷ ರಾದ ಲಯನ್ ಗೀತಾ ವಾದಿರಾಜ.ರಾವ್, ಕಾರ್ಯದರ್ಶಿ ವಿಜೇತ ಹರಿಪ್ರಸಾದ್ ರೈ, ಕೋಶಾಧಿಕಾರಿ ಶೈಲಾ ಉಮೇಶ್ ನಾಯಕ್ ಮತ್ತು ಅವರ ತಂಡಕ್ಕೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಪ್ರಾಂತ್ಯ ಅಧ್ಯಕ್ಷ ಲಯನ್ ಗಿರಿಜಾ ತಲ್ಲೂರು ಶಿವರಾಂ ಶೆಟ್ಟಿ, ವಲಯಾಧ್ಯಕ್ಷ ರಾದ ಲಯನ್ ಕೆ.ಪಿ ಸುರೇಶ್ ಪ್ರಭು ಶುಭಾಶಂಸನೆಗೈದರು.

ವೈದ್ಯಕೀಯ ಚಿಕಿತ್ಸೆ ಮತ್ತು ಮನೆಗೆ ಸೋಲಾರ್ ಲೈಟ್ ನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಪದಗ್ರಹಣ ಅಧಿಕಾರಿಯಾದ ಪಿ.ಯಂ.ಜೆ.ಎಫ್ ಲಯನ್ ಸ್ವಪ್ನ ಸುರೇಶ್ ಇವರನ್ನು ಸಮ್ಮಾನಿಸಲಾಯಿತು. ಸಂಪುಟ ಸದಸ್ಯರಾದ ಲಯನ್ ದಿನಕರ್ ಪೂಂಜಾ, ಲಯನ್ ಸುಬ್ಬಯ್ಯ ಹೆಗ್ಡೆ, ಲಯನ್ ರೋಹನ್ ಆಳ್ವ,ಲಯನ್ ಹರಿಪ್ರಸಾದ್ ರೈ, ಲಯನ್ ರವೀಂದ್ರ ನಾಥ್ ಶೆಟ್ಟಿ, ಲಯನ್ ಟಿ. ಜಿ. ಹೆಗಡೆ ,ಲಯನ್ ವಾದಿರಾಜ .ರಾವ್ ಲಯನ್ ಉಮೇಶ್ ಶೇರಿಗಾರ್, ಲಯನ್ ಗಿರೀಶ್ ರಾವ್, ಲಯನ್ ತಾರಾನಾಥ್.ಶೆಟ್ಟಿ, ಲಯನ್ ಬೀ‌ನೆಶ್, ಲಯನ್ ಶ್ರೀದರ್ ಶೆಟ್ಟಿ, ಲಯನ್ ರಾಜೇಶ್ ಶೇಟ್, ಲಯನ್ ದೀಲಿಪ್ ರೈ, ಲಯನ್ ಕೆ.ವಿ.ಪ್ರಭು, ಉಪಸ್ಥಿತರಿದ್ದರು.

ನಿರ್ಗಮನ ಅಧ್ಯಕ್ಷರಾದ ಲಯನ್ ಉಮೇಶ್ ನಾಯಕ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ವಿಜೇತ ಹರಿಪ್ರಸಾದ್ ರೈ, ವಂದಿಸಿದರು, ಲಯನ್ ಇಂದಿರಾ ಹೆಗ್ಡೆ ಕಾರ್ಯಕ್ರಮ ವನ್ನು ನಿರೂಪಿಸಿದರು

 
 
 
 
 
 
 
 
 
 
 

Leave a Reply