ಹಿಂದೂ ಯುವ ಸೇನೆ ಭೈರಂಪಳ್ಳಿ ವತಿಯಿಂದ ಬಡ ಕುಟುಂಬಕ್ಕೆ ನಿರ್ಮಿಸಿದ ಮನೆ ಹಸ್ತಾಂತರ

ಹಿಂದೂ ಯುವ ಸೇನೆ ಭೈರಂಪಳ್ಳಿ ಘಟಕದಿಂದ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವ ಮೂಲಕ ಹಿಂದುತ್ವದ ಜೊತೆ ಜೊತೆಗೆ ಸಾಮಾಜಿಕ ಬದ್ಧತೆಯನ್ನು ಮೆರೆದಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಹೇಳಿದರು.

ಹಿಂದೂ ಯುವ ಸೇನೆ ಭೈರಂಪಳ್ಳಿ ವತಿಯಿಂದ ಬಡ ಕುಟುಂಬಕ್ಕೆ ನಿರ್ಮಿಸಿದ ಮನೆಯನ್ನು ಹಸ್ತಾಂತರಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಹಿಂದೂ ಯುವ ಸೇನೆ ಬೈರಂಪಳ್ಳಿಯ ಅಧ್ಯಕ್ಷರಾದ ಸದಾಶಿವ ಸಾಲ್ಯಾನ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭೈರಂಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ
ಜಿಯಾನಂದ ಹೆಗ್ಡೆ,ಹಿರಿಯಡ್ಕ ಹಿಂದೂ ಯುವ ಸೇನೆಯ ಅಧ್ಯಕ್ಷ ಶೇಖರ್ ಶೆಟ್ಟಿ, ಗಣ್ಯರಾದ ಶ್ರೀ ಗಣೇಶ್ ನಾಯಕ್, ಪುಂಡಲೀಕ ನಾಯಕ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರದೀಪ ಶೆಟ್ಟಿ, ಸತೀಶ್ ಪೂಜಾರಿ,ಪಂಚಾಯತ್ ಸದಸ್ಯರಾದ ಹರ್ಷಿತ್ ಪೂಜಾರಿ,ಸತೀಶ್ ಶೆಟ್ಟಿ, ಅನಂತು ಕುಲಾಲ್, ದಯಾನಂದ ಕುಲಾಲ್, ಪ್ರಸಾದ್ ಮಲ್ಯ,ಹರೀಶ್ ಎಮ್ ಪಿ ಎಲ್, ವಿನಯ್ ಕುಮಾರ್, ಮತ್ತು ರಾದಕೃಷ್ಣ ನಾಯಕ್, ಮನೋಜ್ ಶೆಟ್ಟಿ, ಪ್ರದೀಪ್ ಕುಲಾಲ್, ಪ್ರಕಾಶ್ ಪೂಜಾರಿ, ಗುರುದತ್, ವೀಕ್ಷಿತ್ ಶೆಟ್ಟಿ,ಪ್ರವೀಣ ಶೆಟ್ಟಿ, ನಂದ ಕುಮಾರ್, ಸುಬಾಸ್ ಶೆಟ್ಟಿ ರೋಹಿತ್ ಶೆಟ್ಟಿ, ದೀಪಕ್, ಕೃಷ್ಣದಾಸ್, ಸಂದೀಪ್ ಶೇರ್ವೆಗಾರ್ ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply