ಸ್ಯಾನ್ ಹೋಸೆಯಲ್ಲಿರುವ ಮಠದ ಶಾಖೆ ಶ್ರೀ ಕೃಷ್ಣ ವೃಂದಾವನದಲ್ಲಿ ಆಶ್ಲೇಷಾ ಬಲಿ

ಭಾವಿ ಪರ್ಯಾಯ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ 49ನೇ ಚಾತುರ್ಮಾಸ್ಯ ಸುಸಂದರ್ಭದಲ್ಲಿ ಸ್ಯಾನ್ ಹೋಸೆಯಲ್ಲಿರುವ ಮಠದ ಶಾಖೆ ಶ್ರೀ ಕೃಷ್ಣ ವೃಂದಾವನದಲ್ಲಿ ಇಂದು ಪುತ್ತಿಗೆ ಮಠದ ಪರಂಪರೆಯ 19 ನೇ ಯತಿಗಳಾದ, ಪುತ್ತಿಗೆ ಮೂಲ ಮಠದಲ್ಲಿ ನೃಸಿಂಹ ದೇವರು ಹಾಗೂ ಗಣಪತಿಯನ್ನು ಪ್ರತಿಷ್ಠಾಪಿಸಿದ, ತಪಸ್ವಿಗಳಾದ ಶ್ರೀ ಕವೀಂದ್ರತೀರ್ಥರ ಆರಾಧನೆಯನ್ನು ಪಾದ್ಯ, ಹಸ್ತೊದಕಗಳನ್ನು ನೀಡುವ ಮೂಲಕ ನೆರವೇರಿಸಿದರು.

ಅಲ್ಲದೆ ನಾಗಪಂಚಮಿ ಯ ಪರ್ವಕಾಲದಲ್ಲಿ ಅನೇಕ ಭಕ್ತರ ಸಮ್ಮುಖದಲ್ಲಿ ಆಶ್ಲೇಷಾ ಬಲಿ ಪೂಜೆಯ ಮೂಲಕ ಶ್ರೀ ಶೇಷಾಂತರ್ಗತ ಸಂಕರ್ಷಣರೂಪಿ ಭಗವಂತನ ಆರಾಧನೆಯನ್ನು ಕೂಡ ನಡೆಸಲಾಯಿತು.

 
 
 
 
 
 
 
 
 
 
 

Leave a Reply