ದುಬೈಯಲ್ಲಿ ನಡೆಯಲಿರುವ ವಿಶ್ವ ಪಟ್ಲ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ದುಬೈ : ಕರಾವಳಿಯ ಗಂಡು ಮೆಟ್ಟಿನ ಕಲೆಗೆ ವಿಶ್ವ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ದುಬೈನಲ್ಲಿ ನಡೆಯಲಿರುವ “ವಿಶ್ವ ಪಟ್ಲ ಸಂಭ್ರಮ-2023” ವಿಶ್ವ ಮಟ್ಟದಲ್ಲಿ ಪ್ರಸಾರ ಹಾಗೂ ಪ್ರವರ್ಧನೆಗೆ . ಸಹಕಾರಿಯಾಗಲಿದ್ದು ಈ ಕಾರ್ಯಕ್ರಮಕ್ಕೆ ಯು.ಎ.ಇ. ತುಳು ಕನ್ನಡಿಗರ ಸಂಪೂರ್ಣ ಸಹಕಾರ ನೀಡಬೇಕು ಎಂದು ಪಟ್ಲ ಪೌಂಡೇಶನ್ ದುಬಾಯಿ ಘಟಕದ ಅಧ್ಯಕ್ಷರಾದ ಶ್ರೀಯುತ ಸರ್ವೋತ್ತಮ ಶೆಟ್ಟಿಯವರು ತಿಳಿಸಿದರು. 

 

ಜೂನ್ 11ರಂದು ದುಬಾಯಿ ಕರಮದ ಶೇಖ್ ರಶೀದ್ ಅಡಿಟೋರಿಯಂನಲ್ಲಿ(ಇಂಡಿಯನ್ ಸ್ಕೂಲ್ ಕರಮ- ವೂದ್ ಮೆಹತಾ ) ನಡೆಯಲಿರುವ ಬಹು ನಿರೀಕ್ಷಿತ ವಿಶ್ವ ಪಟ್ಲ ಸಂಭ್ರಮ ಮತ್ತು ದುಬಾಯಿ ಯಕ್ಷೋತ್ಸವದ ಅಂಗವಾಗಿ ನಡೆಯಲಿರುವ ಅದ್ದೂರಿಯ ಯಕ್ಷಗಾನ ಕಾರ್ಯಕ್ರಮ ದಶಾವತಾರ ಇದರ ಆಮಂತ್ರಣ ಪತ್ರ ಮತ್ತು ಪ್ರವೇಶಪತ್ರದ ಬಿಡುಗಡೆ ಸಮಾರಂಭ ಇತ್ತೀಚೆಗೆ  ಹೋಟೇಲ್ ಫಾರ್ಚೂನ್ ಪ್ಲಾಝದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಶ್ರೀಯುತರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಕಾರ್ಯಕ್ರಮದಲ್ಲಿ ಪ್ರಮುಖ ಅಭ್ಯಾಗತರಾಗಿ ಭಾಗವಹಿಸಲಿರುವ ಪಟ್ಲ ಟ್ರಸ್ಟ್ ನ ಗೌರವಾಧ್ಯಕ್ಷರಾದ‌ ಶ್ರೀಯುತ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಮತ್ತು ಪ್ರಧಾನ ಸಂಚಾಲಕರಾದ ಶ್ರೀಯುತ ಹರೀಶ ಶೆಟ್ಟಿ ಐಕಳ, ಅಲ್ಲದೆ ಎಲ್ಲಾ ಪಟ್ಲ ಫೌಂಡೇಶನ್ ನ 40 ಘಟಕಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು. 


 

ಕುಮಾರಿ ವೈಷ್ಣವಿ ಮನೋಹರ್ ಶೆಟ್ಟಿಗಾರ್ ಮತ್ತು ಕುಮಾರಿ ಪ್ರಾಪ್ತಿ ಜಯಾನಂದ ಪಕ್ಕಳರ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ವಿಶ್ವ ಪಟ್ಲ ಸಂಭ್ರಮ ಮತ್ತು ದಶಾವತಾರ ಯಕ್ಷಗಾನ ಪ್ರಸಂಗಗಳ ರೂಪುರೇ‍ಷೆಗಳನ್ನು ಸಭೆಗೆ ವಿವರಿಸಿದರು. ಜೊತೆಗೆ ಯಕ್ಷಧ್ರುವ ಪಟ್ಲ ಘಟಕದ ಸ್ಥಾಪಕರಾದ ಸತೀಶ ಶೆಟ್ಟಿಯವರ ಗಾನ ಸಾರಥ್ಯದಲ್ಲಿ ನಡೆಯಲಿರುವ ದಶಾವತಾರ ಯಕ್ಷಗಾನ ಕಾರ್ಯಕ್ರಮ ದಲ್ಲಿ ಭಾಗವಹಿಸಲಿರುವ ಅತಿಥಿ ಕಲಾವಿದರಾದ, ಗಾನ ವಿಶಾರದ ಶ್ರಿಯುತ ರವಿಚಂದ್ರ ಕನ್ನಡಿಕಟ್ಟೆ, ಪ್ರಖ್ಯಾತ ಚೆಂಡೆ-ಮದ್ದಳೆ ವಾದಕರಾದ ಶ್ರಿಯುತ ಪದ್ಮನಾಭ ಉಪಾಧ್ಯಾಯ ಮತ್ತು ಶ್ರೀಯುತ ಚೈತನ್ಯಕೃಷ್ಣ ಪದ್ಯಾಣ, ಹಾಗೂ ವರ್ಣವಸ್ತ್ರಾಲಂಕಾರ ತಜ್ಞರಾದ ಶ್ರೀಯುತ ಗಂಗಾಧರ ಶೆಟ್ಟಿಗಾರ್, ಕಿನ್ನಿಗೋಳಿ, ಶ್ರೀಯುತ ನಿತಿನ್ ಕುಂಪಲ ಮತ್ತು ಶ್ರೀಯುತ ಮನೋಜ್ ಶೆಟ್ಟಿಗಾರ್ ಹಳೆಯಂಗಡಿಯವರ ವಿವರಗಳನ್ನು ಸಭೆಗೆ ನೀಡಿದರು.

ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ಗುರುಗಳೂ ಪ್ರಸಂಗ ನಿರ್ದೇಶಕರೂ ಆದ ಶ್ರೀಯುತ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು, ದಶಾವತಾರದ ಕಥಾಹಂದರ- ಪ್ರದರ್ಶನ ವಿಶೇಷತೆಗಳ ಜೊತೆಗೆ ದಶಾವತಾರ ಪ್ರಸಂಗಗಳಿಗೆ ಆಯ್ದುಕೊಳ್ಳುವ ಮೂಲ ಪ್ರಸಂಗ ಕವಿಗಳ ವಿವರವನ್ನು ಸಭೆಯ ಮುಂಡಿಟ್ಟರು.


ಈ ಸಂದರ್ಭ ವೇದಿಕೆಯಲ್ಲಿ ಉಪಸ್ಥಿತರಿದ್ದ ಹರೀಶ್ ಶೇರಿಗಾರ್ (ಉದ್ಯಮಿ, ಕನ್ನಡ ಮತ್ತು ತುಳು ಚಿತ್ರ ನಿರ್ಮಾಪಕರು),ಶ್ರೀ ಹರೀಶ್ ಬಂಗೇರ (ಉದ್ಯಮಿ, ಪೋಷಕರು – ಕರ್ನಾಟಕ ಸಂಘ ದುಬೈ, ಕನ್ನಡ ಚಿತ್ರ ನಿರ್ಮಾಪಕರು), ಶ್ರೀ ಪುತ್ತಿಗೆ ವಾಸುದೇವ ಭಟ್ (ಗೌರವಾಧ್ಯಕ್ಷರು, ಯಕ್ಷ ಧ್ರುವ ಪಟ್ಲ ಫೌಂಡೇಶನ್ UAE), ಶ್ರೀ ನಾಗರಾಜ ರಾವ್ (ಆಡಳಿತ ನಿರ್ದೇಶಕರು -ಭೀಮ ಜುವೆಲ್ಲರಿ ದುಬೈ), ಶ್ರೀ ಬಿ. ಕೆ ಗಣೇಶ್ ರೈ (ಕಲಾತ್ಮಕ ನಿರ್ದೇಶಕರು), ಶ್ರೀ ಸುಧಾಕರ ರಾವ್ ಪೇಜಾವರ (ಉದ್ಯಮಿ, ಬ್ರಾಹ್ಮಣ ಸಮಾಜ ಯುಎಇ), ಶ್ರೀ ವರದರಾಜ್ ಶೆಟ್ಟಿಗಾರ್ (ಪದ್ಮಶಾಲಿ ಸಮುದಾಯ, ದುಬೈ), ಶ್ರೀ ಬಾಲಕೃಷ್ಣ ಸಾಲಿಯಾನ್ (ಸಂಘಟಕರು, ಮೊಗವೀರ ಸಮುದಾಯ ದುಬೈ),ಶ್ರೀ ಮನೋಹರ್ ತೋನ್ಸೆ  (ಲೇಖಕರು, ಬಿಲ್ಲವಾಸ್ ಅಬುಧಾಬಿ),ಶ್ರೀ ಸುಂದರ್ ಶೆಟ್ಟಿ (ಉದ್ಯಮಿ, ನಿಹಾಲ್ ರೆಸ್ಟೋರೆಂಟ್ ಅಬುಧಾಬಿ), ರಮಾನಂದ ಶೆಟ್ಟಿ ( ಉದ್ಯಮಿ‌ ಕಲಾ ಪೋಷಕರು), ಶ್ರೀ ಶಶಿಧರ್ ನಾಗರಾಜಪ್ಪ (ಕನ್ನಡ ಪಾಠ ಶಾಲೆ ದುಬೈ), ಶ್ರೀ ಆತ್ಮನಂದ ರೈ(ತುಳು ಚಿತ್ರ ನಿರ್ಮಾಪಕರು),ಶ್ರೀ  ಪ್ರಭಾಕರ ಸುವರ್ಣ ಕರ್ನಿರೆ (ಅಧ್ಯಕ್ಷರು, ಬಿಲ್ಲವ ಫ್ಯಾಮಿಲಿ ದುಬೈ) ಮೊದಲಾದವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

 
ಎಲ್ಲಾ ಗಣ್ಯರು ಒಂದಾಗಿ, ಕಾರ್ಯಕ್ರಮದ ಆಮಂತ್ರಣ ಪತ್ರ ಮತ್ತು ಪ್ರವೇಶ ಬಿಡುಗಡೆಗೊಳಿಸಿ, ಸಮಸ್ತ ಯುಎಇಯಲ್ಲಿ ಯಕ್ಷಗಾನದ ಕಂಪನ್ನು ಮನೆ ಮನೆಗೂ ಪಸರಿಸಿ, ಕಿರಯರಿಂದ ಹಿರಿಯರವರೆಗೆ ಯಕ್ಷಗಾನ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನಮ್ಮ ಅರ್ವಾಚೀನ ಪ್ರಬುದ್ಧ ಯಕ್ಷಗಾನ ಕಲೆಯನ್ನು ಪಸರಿಸುತ್ತಿ ರುವ ಯಕ್ಷಗಾನ ಅಭ್ಯಾಸ ಕೇಂದ್ರದ ಈ ಕಾರ್ಯಕ್ರಮವನ್ನು ಬೆಂಬಲಿಸಬೇಕಾದ ಅಗತ್ಯವನ್ನು ವಿವರಿಸಿ, ನಮ್ಮ ಜೊತೆಗೆ ಅಖಂಡ ಯುಎಇಯ ಸರ್ವ ಕಲಾಭಿಮಾನಿಗಳ, ಕೌಟುಂಬಿಕ-ಸಾಂಸ್ಕೃತಿಕ ಸಂಘಟನೆಗಳು ಪೂರ್ಣ ಪ್ರಮಾಣದಿಂದ ಬೆಂಬಲಿಸಬೇಕೆಂದು ಕರೆ ನೀಡಿದರು.  ಯಕ್ಷಗಾನ ಅಭ್ಯಾಸ ಕೇಂದ್ರದ ಸದಸ್ಯರಾದ ಶ್ರೀಯುತ ರಾಜೇಶ್ ಕುತ್ತಾರು, ಕಾರ್ಯಕ್ರಮ ನಿರ್ವಹಿಸಿದರೆ, ಶ್ರೀಯುತ ಗಿರೀಶ್ ನಾರಾಯಣ ವಂದಿಸಿದರು.
 
 
 
 
 
 
 
 
 
 
 

Leave a Reply