ಸುನೀತಾಳ ಜೀವನ ಪಯಣಕ್ಕೆ ಆಸರೆಯಾದ ಸಂದೀಪ್ 

ಉಡುಪಿ: ಉಡುಪಿಯ‌ ಕರಂಬಳ್ಳಿ ಗ್ರಾಮದ ನಿವಾಸಿಯಾಗಿರುವ ಸುನೀತಾ ಅವರಿಗೆ ಪೋಲಿಯೋ ಎಂಬ ಮಹಾಮಾರಿ ಎರಡೂ ಕಾಲುಗಳನ್ನ ಕಿತ್ತುಕೊಂಡಿತ್ತು. ಈ ಅಂಗವೈಕಲ್ಯತೆ ಆಕೆಯ ನೆಮ್ಮದಿ ಹಾಳುಮಾಡಿತ್ತು.‌ ಆದರೆ ಇದೀಗ ಅವಳ ಪಾಲಿಗೆ ಮದುವೆಯ ರೂಪದಲ್ಲಿ ಅದೃಷ್ಟ ಒಲಿದಿದೆ.

ಹೌದು ನೋಡಲು ಸುಂದರವಾಗಿದ್ದರೂ ಕಾಲಿಲ್ಲದ ಕಾರಣ ಪಿಯುಸಿವರೆಗೆ ಓದಿಕೊಂಡು ತಂದೆ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದರು ಸುನೀತಾ. ತನ್ನ ಕಾಲಿನಂತೆ ಬದುಕು ಕೂಡಾ ನಿರಾಧಾರವಾಗುತ್ತೆ ಎಂಬ ಬೇಸರದಲ್ಲಿ ಖಿನ್ನತೆಗೆ ಜಾರಿದ್ದಳು. ಆದರೆ ಕಾಲು ಕಿತ್ತುಕೊಂಡಿದ್ದ ದೇವರು ಮದುವೆಯ ವಿಚಾರದಲ್ಲಿ ಉತ್ತಮ ಬಾಳ ಸಂಗಾತಿಯನ್ನೇ ನೀಡಿದ್ದೋನೆ. ದುಬೈನ ಆಯಿಲ್ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿರುವ ಮಂಗಳೂರಿನ ನಿವಾಸಿ‌ ಸಂದೀಪ್ ಈಕೆಯ ಜೀವನ ಪಯಣಕ್ಕೆ ಜೊತೆಯಾಗಲು ತಾನೇ ಮುಂದೆ ಬಂದಿದ್ದಾರೆ.

ಆತ ಮನೆಯವರ ಒಪ್ಪಿಗೆಯನ್ನು ಪಡೆದು ಉಡುಪಿಯ ಕಂಬಳ್ಳಿ ದೇವಸ್ಥಾನದಲ್ಲಿ ಮದುವೆ ನಡೆಯಿತು. ಮಾನವೀಯತೆ ಇನ್ನೂ ಸತ್ತಿಲ್ಲ ಅನ್ನೋದಕ್ಕೆ ಉಡುಪಿಯ ಕರಂಬಳ್ಳಿಯಲ್ಲಿ ನಡೆದ ಈ ವಿಶೇಷ ಮದುವೆಯೇ ಉದಾಹರಣೆ. ಈಗಿನ‌ ಕಾಲದಲ್ಲಿ ಸಣ್ಣ ಪುಟ್ಟ ತೊಂದರೆಗಳಿದ್ದರು ಹುಡುಗಿ ನನಗೆ ಬೇಡ ಅನ್ನುವವರೆ ಹೆಚ್ಚು. ಆದರೂ ದುಬೈನಂತಹ ನಾಡಿನಲ್ಲಿ ದೊಡ್ಡ ಕಂಪೆನಿಯೊಂದರಲ್ಲಿ ಕೆಲಸದಲ್ಲಿರುವ ಯುವಕ ಕಾಲಿಲ್ಲದ ಯುವತಿಗೆ ಬಾಳುಕೊಡುವ ನಿರ್ಧಾರ ಮಾಡಿ‌ ಈ ಸುನಿತಾಳ ಕೈಹಿಡಿದು ಸಮಾಜಕ್ಕೆ ಮಾದರಿಯಾಗಿದ್ದಾರೆ. 

ಆತುರದ ನಿರ್ಧಾರ ತೆಗೆದುಕೊಳ್ಳೋದು ಸುಲಭ. ಆದರೆ ಜೀವನವಿಡೀ ನಿಭಾಯಿಸುವುದು ಕಷ್ಟ. ಆದರೆ ಈ ಜೋಡಿಯ ವಿಚಾರದಲ್ಲಿ ಹಾಗಾಗುವುದಿಲ್ಲ ಅನ್ನೋದು ಮನೆಯವರ ಅಭಿಪ್ರಾಯ. ಇಂತಹ ಹುಡುಗಿಗೆ ಬಾಳು ನೀಡಬೇಕೆಂದು ಮೊದಲೇ ನಿರ್ಧರಿಸಿದ್ದ ಸಂದೀಪ್, ಸಂಬಂಧಿಕರ ಮೂಲಕ ಈ ಯುವತಿಯ ಬಗ್ಗೆ ವಿಚಾರಿಸಿ ತಾನೇ ಮುಂದೆ ಬಂದು ವಿವಾಹವಾಗಿದ್ದಾರೆ. ಇನ್ನೇನು ಮನೆಮಗಳ ಬಾಳು ನರಕವಾಯ್ತು ಎಂದು ದಿವೂ ಕೊರಗುತ್ತಿದ್ದ ಸುನಿತಾ ಕುಟುಂಬದವರಿಗೆ ಜಗತ್ತಿನ ಭಾರವೆಲ್ಲಾ ಹಗುರಾದಷ್ಟು ಸಂತೋಷ ಆಗಿದೆ. ಮದುವೆ ಮುಗಿಯುವವರೆಗೂ ಆನಂದ ಬಾಷ್ಪ ಸುರಿಸಿ ಪ್ರೀತಿಯ ಮಗಳನ್ನು ಬೀಳ್ಕೊಟ್ಟಿದ್ದಾರೆ.

ತನ್ನ ಕಷ್ಟ ಹೇಳಿಕೊಂಡು ಸುನಿತಾ ಮದುವೆಯಾಗಲಿಲ್ಲ. ತಾನು ಆದರ್ಶ ಮೆರೆದಿದ್ದೇನೆಂಬ ಹಮ್ಮ ಬಿಮ್ಮು ಸಂದೀಪ್ ಗೆ ಇಲ್ಲ, ಹಾಗಾಗಿ ಇಬ್ಬರೂ ಮಾದ್ಯಮಗಳಿಗೆ ಮಾತನಾಡಿಲ್ಲ. ಈ ಅಪರೂಪದ ಜೋಡಿ ಸುಖವಾಗಿರಲಿ ಎಂಬುಷ್ಟೇ ನಮ್ಮ ಹಾರೈಕೆ.

 
 
 
 
 
 
 
 
 
 
 

Leave a Reply