ಕುಂದಾಪುರ: ಜಿಲ್ಲೆಯಲ್ಲಿ ಕೋರೊನಾ ಸೋಂಕು ಇಳಿಕೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗಿಲ್ಲ. 38% ದಿಂದ 19% ಇಳಿದಿದೆ, ಇದೀಗ ಜೂನ್ 7 ರವರೆಗೆ 10% ಕ್ಕಿಂತ ಕಡಿಮೆ ಸಂಖ್ಯೆಗೆ ಇಳಿಯಬೇಕೆಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಪಾಸಿಟಿವಿಟಿಯ ಸಂಖ್ಯೆ ಕಡಿಮೆಯಾಗದಿದ್ದರೆ ಮತ್ತೆ ಜಿಲ್ಲೆಯಲ್ಲಿ ಲಾಕ್’ಡೌನ್ ಮುಂದುವರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಜನರು ಇನ್ನು ಕೂಡ ತಿರುಗಾಡುತ್ತಿದ್ಧಾರೆ.ಪಂಚಾಯತ್ ನಲ್ಲಿ ಈಗಾಗಲೇ ಅತೀವ ಪಾಸಿಟಿವ್ ಇರುವ ಗ್ರಾಮಗಳನ್ನು ಸಿಲ್’ಡೌನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಜನರ ಸಹಕಾರ ಮುಖ್ಯ, ಇಲ್ಲದಿದ್ದರೆ ಮತ್ತಷ್ಟು ದಿನ ಲಾಕ್’ಡೌನ್ ವಿಸ್ತರಣೆ ಮಾಡಬೇಕಾಗುತ್ತದೆಂದು ಹೇಳಿದ್ದಾರೆ.