ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ನಡೆಯುವ ದಸರಾ ಉತ್ಸವಕ್ಕೆ ನಿರ್ಮಿಸಲಾದ ನವದುರ್ಗೆಯರ ಮತ್ತು ಶಾರದಾ ಮಾತೆಯ ವಿಗ್ರಹ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು “ಕುಬೇರ ಆರ್ಟ್ಸ್, ಶಿವಮೊಗ್ಗ” ಇದರ ಕುಶಲ ಕರ್ಮಿಗಳು ಇಂದು ದೇವಸ್ಥಾನ ಆಡಳಿತ ಸಮಿತಿಯ ಸದಸ್ಯರಿಗೆ ಹಸ್ತಾಂತರಿಸಿದರು.
ನುರಿತ ಕಲಾವಿದರಿಂದ ನಿರ್ಮಿಸಲಾದ ವಿಗ್ರಹಗಳು ಅತ್ಯದ್ಭುತವಾಗಿ ಮೂಡಿ ಬಂದಿದ್ದು ಭಕ್ತರ ಕಣ್ಮನ ಸೆಳೆಯಲಿದೆ.