ಶೋಭಾ ಮಂತ್ರಿ : ಪೆರಂಪಳ್ಳಿ ಬಿಜೆಪಿ ಸಂತಸ – ಜಿ ವಾಸುದೇವ ಭಟ್ ಪೆರಂಪಳ್ಳಿ

ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಮಂತ್ರಿಯಾಗುತ್ತಿರುವುದಕ್ಕೆ ಉಡುಪಿ ಪೆರಂಪಳ್ಳಿ ಬಿಜೆಪಿ ಕಾರ್ಯಕರ್ತರು ಅತೀವ ಸಂಭ್ರಮದ ಲ್ಲಿದ್ದಾರೆ.

2019 ರ ಲಕ್ಷ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಪೆರಂಪಳ್ಳಿಯ ಶ್ರೀ ಮಹಾ ಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ನಡೆಯುತ್ತಿತ್ತು.

ಅದೇ ಸಂದರ್ಭದಲ್ಲಿ ಶ್ರೀದೇವಳಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಆಗಮಿಸಿದ್ದರು. ಆಗ ಈ ಬಾರಿ ಶೋಭಾ ಗೆದ್ದರೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿಯ ದಯೆಯಿಂದ ನಿಶ್ಚಯ ವಾಗಿಯೂ ಕೇಂದ್ರದಲ್ಲಿ ಮಂತ್ರಿಯಾಗ್ತಾರೆ. ಆ ಕೀರ್ತಿಯನ್ನು ಶ್ರೀ ಸ್ವಾಮಿಯು ಉಳಿಸಿಕೊಳ್ಳು ವಂತೆ ಪ್ರಾರ್ಥನೆ ಸಲ್ಲಿಸಲಾಗಿತ್ತು.

ಹಾಗೆ ಮಂತ್ರಿಯಾದರೆ ಉಡುಪಿ ಭೇಟಿಗೆ ಬಂದಾಗ ಮತ್ತೆ ಶ್ರೀ ದೇವಳಕ್ಕೆ ಬಂದು ದೇವರ ದರ್ಶನ ಪಡೆಯುವಂತೆ ಅರ್ಚಕರು ತಂತ್ರಿಗಳು ಭಕ್ತರು ಶೋಭಾರಲ್ಲಿ ತಿಳಿಸಿದ್ದರು.

ಈಗ ಎಲ್ಲ ಅಂದುಕೊಂಡಂತೆ ಆಗಿದೆ. ಶ್ರೀ ಕ್ಷೇತ್ರದ ಆರಾಧ್ಯದೇವರಾದ ಮಹಾಲಿಂಗೇಶ್ವರ ಮಹಾಗಣಪತಿ ದೇವರು ಶೋಭಾ ತಮ್ಮ ಸಾನ್ನಿಧ್ಯದ ಕೀರ್ತಿ ಉಳಿಸಿಕೊಂಡಿದ್ದಾರೆ.

ಶೋಭಾ ಮಂತ್ರಿಯಾಗ್ತಾ ಇದ್ದಾರೆ ಎನ್ನುವ ಸಂಭ್ರಮದಲ್ಲಿ ಗ್ರಾಮದ ಬಿಜೆಪಿ ಕಾರ್ಯಕರ್ತ ರಿದ್ದಾರೆ.‌ ಇನ್ನು ಮಂತ್ರಿಯಾಗಿ ಉಡುಪಿಗೆ ಆಗಮಿಸುವ ಶೋಭಾ ಕ್ಷೇತ್ರಕ್ಕೆ ಭೇಟಿ ನೀಡಿ ಮತ್ತೆ ದೇವರ ದರ್ಶನ ಪಡೆದೇ ಪಡೀತಾರೆ ಅನ್ನೋ ಪೂರ್ಣ ವಿಶ್ವಾಸ ಗ್ರಾಮದ ಬಿಜೆಪಿ ಅಭಿಮಾನಿಗಳು ಮತ್ತು ಕಾರ್ಯಕರ್ತರದ್ದು.

 

 
 
 
 
 
 
 
 
 
 
 

Leave a Reply