ಉಡುಪಿ: ಬಾರ್ಕೂರು ವ್ಯಾಪ್ತಿಯಲ್ಲಿರುವ ಬಡ ಕುಟುಂಬವೊಂದಕ್ಕೆ ಸಾಂಸಾರಿಕ ಸಮಸ್ಯೆ ಮತ್ತು ಲಾಕ್ ಡೌನ್ನಿಂದಾಗಿ ಜೀವನ ನಿರ್ವಹಣೆಯು ಕಷ್ಟವೆಂದು ಚೈಲ್ಡ್ ಲೈನ್-1098, ಉಡುಪಿಗೆ ಕರೆ ಬಂದಾಗ ರೋಟರಿ ಉಡುಪಿಯ ಸಹಯೋಗದೊಂದಿಗೆ ಆ ಬಡ ಕುಟುಂಬಕ್ಕೆ ಒಂದು ತಿಂಗಳಿಗೆ ಬೇಕಾಗುವಷ್ಟು ಆಹಾರ ಸಾಮಗ್ರಿಗಳನ್ನು ನೀಡಲಾಯಿತು.
ರೋಟರಿ ಉಡುಪಿಯ ಅಧ್ಯಕ್ಷೆ ರೋ.ರಾಧಿಕಾ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ರೋ.ದೀಪಾ ಭಂಡಾರಿ, ರೋ.ದಿನೇಶ್ ಭಂಡಾರಿ, ರೋ.ವನಿತಾ ಆರ್. ಉಪಾಧ್ಯಾಯ, ಚೈಲ್ಡ್ ಲೈನ್ ಉಡುಪಿಯ ನಿರ್ದೇಶಕ ರೋ. ರಾಮಚಂದ್ರ ಉಪಾಧ್ಯಾಯ,ಸಹ ನಿರ್ದೇಶಕ ರೋ. ಗುರುರಾಜ್ ಭಟ್,ಚೈಲ್ಡ್ ಲೈನ್ ನ ಆಪ್ತಸಮಾಲೋಚಕಿ ಜ್ಯೋತಿ ಉಪಸ್ಥಿತರಿದ್ದರು.