ರೋಟರಿ ಜಿಲ್ಲೆ 3182 ವಲಯ 4, ಸಹಾಯಕ ಗವರ್ನರ್ ಆಗಿ ಡಾ. ಕಲ್ಯ ಸುರೇಶ್ ಶೆಣೈ

ಸ್ವಹಿತ ಮೀರಿದ ಸೇವೆಯೊಂದಿಗೆ ಮನುಕುಲದ ಸೇವೆಯಲ್ಲಿ ಜಗತ್ತಿನಾದ್ಯಂತ ಗುರುತಿಸಿಕೊಂದಿದೆ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ.
ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಕಂದಾಯ ಜಿಲ್ಲೆಯನ್ನು ಒಳಗೊಂಡ ರೋಟರಿ ಜಿಲ್ಲೆ 3182ರ ರೋಟರಿ ಕಟಪಾಡಿ, ರೋಟರಿ ಉದ್ಯಾವರ, ರೋಟರಿ ಉಡುಪಿ, ರೋಟರಿ ಉಡುಪಿ ರೋಯಲ್, ರೋಟರಿ ಮಣಿಪಾಲ ಹಿಲ್ಸ್, ರೋಟರಿ ಮಣಿಪಾಲ, ರೋಟರಿ ಮಣಿಪಾಲ ಟೌನ್, ರೋಟರಿ ಪರ್ಕಳ, ರೋಟರಿ ಪೆರ್ಡೂರು ಕ್ಲಬ್‌ಗಳನ್ನು ಒಳಗೊಂಡ ವಲಯ 4ರ ಸಹಾಯಕ ಗವರ್ನರ್ ಆಗಿ ಖ್ಯಾತ ಮೂಳೆ ತಜ್ಞ ವೈಧ್ಯರು, ರೋಟರಿ ಉಡುಪಿಯ ಸದಸ್ಯ, ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆಯ ಡಾ| ಕಲ್ಯ ಸುರೇಶ್ ಶೆಣೈ ನೇಮಕಗೊಂಡಿರುತ್ತಾರೆ.
2021-22ನೇ ಸಾಲಿನ ಅಂತಾರಾಷ್ಟ್ರೀಯ  ರೋಟರಿ ಅಧ್ಯಕ್ಷ ಭಾರತೀಯರೂ ಆದ ಶೇಕರ್ ಮೆಹ್ತಾ ಇವರು ಸೇವೆಯಿಂದ ಸಮಾಜದಲ್ಲಿ ಬದಲಾವಣೆ ತನ್ನಿರಿ ಎಂಬ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡಿದ್ದಾರೆ. ಯಾವುದೇ ನಮ್ಮ ಸೇವೆಯಿಂದ ಇತರರ ಬದುಕಿನಲ್ಲಿ ಬದಲಾವಣೆ ಗಳಾದಾಗ ಅದು ನಿಜವಾದ ಸೇವೆ. ರೋಟರಿ ವರ್ಷ ಜುಲೈ 01ರಿಂದ ಪ್ರಾರಂಭಗೊಂಡು ಜೂನ್ 30ರ ವರೆಗಿರುತ್ತದೆ.  
 
 
 
 
 
 
 
 
 
 
 

Leave a Reply