ಪೋಲಿಸರ ಮೇಲೆ ನಡೆದ ಹಲ್ಲೆಯನ್ನು ಸಹಿಸಲು ಸಾಧ್ಯವಿಲ್ಲ, – ಜಯರಾಂ ಅಂಬೆಕಲ್ಲು

ಉಡುಪಿ : ಉಪ್ಪಿನಂಗಡಿಯಲ್ಲಿ ಹಿಂದೂಗಳು ಮಾಡುತ್ತಿರುವ ಮೀನು ವ್ಯವಹಾರವನ್ನು ತಡೆಗಟ್ಟಲು ಮತೀಯ ಸಂಘಟನೆಯವರು ಮಾರಾಕಾಯುದಗಳಿಂದ ದಾಳಿ ಮಾಡಿರುವುದು ಖಂಡನೀಯ.

ಇದರ ನಿಮಿತ್ತ ಪೋಲಿಸರ ದಿಟ್ಟ ಕ್ರಮ ಶ್ಲಾಘನೀಯ. ಆದರೆ ಇದೇ ವಿಷಯದಲ್ಲಿ ಪೋಲಿಸರ ಮೇಲೆ ನಡೆದ ಹಲ್ಲೆಯನ್ನು ಯಾವುದೇ ಕಾರಣಕ್ಕೂ ಉಡುಪಿ ಜಿಲ್ಲಾ ರಾಮ್ ಸೇನಾ ಸಹಿಸುವುದಿಲ್ಲ. ಧರ್ಮಾತೀತ, ಜಾತ್ಯತೀತ, ರಾಜಕೀಯೇತರವಾಗಿ ನಮ್ಮನ್ನು ರಕ್ಷಿಸುತ್ತಿರುವ ಪೋಲಿಸ್ ರವರ ಮೇಲೆ ಹಲ್ಲೆ ಮಾಡಿದರೆ ರಾಮ್ ಸೇನೆಯು ಯಾವುದೇ ಕಾರಣಕ್ಕೂ ಕೈ ಕಟ್ಟಿ ಕುಳಿತು ಕೊಳ್ಳಲ್ಲ, ಸದಾ ನಮ್ಮ ರಕ್ಷಕರೋಂದಿಗೆ ನಾವು ಇರುತ್ತೇವೆ.

ಮತಾಂಧ ಶಕ್ತಿಗಳು ಕರೆ ನೀಡಿದ ಹಾಗೆ ಮಂಗಳೂರು ಪೋಲಿಸ್ ವರಿಷ್ಠಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕುವುದು ಬಿಡಿ, ಪಂಪ್ ವೆಲ್ ಸರ್ಕಲ್ ನಿಂದ ಮುಂದೆ ಹೋಗಲು ರಾಮ್ ಸೇನಾ ಸಂಘಟನೆಯ ಉಡುಪಿ ಹಾಗೂ ದ.ಕ ಜಿಲ್ಲಾ ಕಾರ್ಯಕರ್ತರು ಬಿಡುವುದಿಲ್ಲ ಏಂದು ಉಡುಪಿ ಜಿಲ್ಲಾ ರಾಮ್ ಸೇನೆಯ ಅಧ್ಯಕ್ಷ ಜಯರಾಂ ಅಂಬೆಕಲ್ಲು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply