ಉಡುಪಿಯಲ್ಲಿ ನಾಡೋಜ ಡಾ. ಮಹೇಶ್‌ ಜೋಶಿ ಅವರಿಗೆ ಅಭಿನಂದನಾ ಸಮಾರಂಭ

ಕನ್ನಡ ಸಾಹಿಷ್ಯ ಪರಿಷತ್ತು ಉಡುಪಿ ಜಲ್ಲೆ ​ವತಿಯಿಂದ ​ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ನಾಡೋಜ ಡಾ. ಮಹೇಶ್‌ ಜೋಶಿ ಅವರಿಗೆ ಅಭಿನಂದನಾ ಸಮಾರಂಭ ಹಾಗು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ನೀಲಾವರ ಸುರೇಂದ್ರ ಅಡಿಗ ಇವರ ಸೇವಾ ಸ್ವೀಕಾರ ಸಮಾರಂಭವು ದಿನಾಂಕ: ೨೦-೧೨-೨೦೨೧ನೇ ಸೋಮವಾರ ಅಪರಾಹ್ನ ೨: ೦೦ಕ್ಕೆ, ಜಿ. ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇಲ್ಲಿ ನಡೆಯಲಿದೆ

ಅತಿಥಿಗಳಾಗಿ ಶ್ರೀ ಕೂರ್ಮ ರಾವ್‌ ಎಮ್‌, ಮಾನ್ಯ ಜಿಲ್ಲಾಧಿಕಾರಿಗಳು, ಉಡುಪಿ ಜಲ್ಲೆ, ಡಾ. ಭಾಸ್ಕರ ಶೆಟ್ಟಿ ಎಸ್‌, ಪ್ರಾಂಶುಪಾಲರು, ಜಿ.ಶಂಕರ್‌ ಸ.ಮ.ಪ್ರದರ್ಜೆ ಕಾಲೇಜು, ಉಡುಪಿ, ಶ್ರೀ ಕುಮಾರ ಬೆಕ್ಕೇರಿ, ಸಹಾಯಕ ನಿರ್ದೇಶಕರು, ಕನ್ನಡ-ಸಂಸ್ಕೃತಿ ಇಲಾಖೆ, ಉಡುಪಿ ಜಲ್ಲೆ, ಶ್ರೀ ಬಿ. ಮಂಜುನಾಥ, ಸಹಾಯಕ ನಿರ್ದೇಶಕರು ವಾರ್ತಾ ಮತ್ತು ಪ್ರಸಾರ ಇಲಾಖೆ, ಉಡುಪಿ ಭಾಗವಹಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕದ ನಿಕಟಪೂರ್ವ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ಕೋಟೇಶ್ವರ ಹಾಗು ನರೇಂದ್ರ ಕುಮಾರ್‌ ಕೋಟ ಪರಿಷತ್ತಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply