ಉಡುಪಿ : ಚಿತ್ತರಂಜನ್ ಸರ್ಕಲ್ ಬಳಿಯ ರಾಯಲ್ ಮಹಲ್ ವಾಣಿಜ್ಯ ಸಂಕೀರ್ಣ ಕಟ್ಟಡ ಹತ್ತು ದಿನಗಳ ಹಿಂದೆ ಧರಾಶಾಹಿಯಾಗಿರುತ್ತದೆ. ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ. ಕಟ್ಟಡ ಉರುಳಿ 10 ದಿನವಾದರೂ ತೆರವು ಗೊಳಿಸುವ ಕಾರ್ಯ ಆಮೆ ಗತಿಯಲ್ಲಿ ನಡೆಯುತ್ತಿದೆ.
ಉಳಿದ ಪಾರ್ಶ್ವ ಭಾಗವು ಆಗಲೋ ಇಗಲೋ ಉರುಳಿ ಬಿಳುವ ಸಾಧ್ಯತೆ ಇದೆ. ಕಟ್ಟಡ ಇರುವ ಪ್ರದೇಶವು ನಗರದ ಜನ ಸಂಪರ್ಕ ಇರುವ ಪ್ರಮುಖ ಪ್ರದೇಶವಾಗಿದೆ. ಇಲ್ಲಿ ಹೆರಿಗೆ ಆಸ್ಪತ್ರೆ, ರಾಷ್ಟ್ರಿಕೃತ ಬ್ಯಾಂಕುಗಳು, ವಾಣಿಜ್ಯ ಕೇಂದ್ರಗಳು, ಚಿನ್ನಾಭರಣ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ.
ಹಾಗಾಗಿ ಈ ಪ್ರದೇಶದಲ್ಲಿ ಸಾರ್ವಜನಿಕರ, ವಾಹನಗಳ ಸಂಚಾರವು ಅಧಿಕವಾಗಿದ್ದು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ, ಅನಾಹುತಗಳು ಸಂಭವಿಸುವ ಮೊದಲೇ ಜಿಲ್ಲಾಡಳಿತ, ಅಥವಾ ನಗರಸಭೆ ತಕ್ಷಣದಲ್ಲಿ ಬಿರುಕು ಬಿದ್ದಿರುವ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹಗಳು ವ್ಯಕ್ತವಾಗಿದೆ.
ಸರ್ಕಲ್ ಬಳಿ ಅಧಿಕ ಜನ ಸಂಚಾರವಿರುವ ರಸ್ತೆಗೆ ಅಡ್ಡಲಾಗಿ ಬ್ಯಾರಿಕ್ಯಾಡ್ ಅಳವಡಿಸಿ, ರಸ್ತೆ ಬಂದ್ ಮಾಡಿರುವುದರಿಂದ ಸಾರ್ವಜನಿಕರಿಗೆ ನಿತ್ಯ ತೊಂದರೆಯಾಗುತ್ತಿದೆ.
ಅಪಾಯದ ಸ್ಥಿತಿಯಲ್ಲಿ ಇರುವ ಕಟ್ಟಡವನ್ನು ನೆಲಸಮಗೊಳಿಸುವ ಪ್ರಕ್ರಿಯೆಗಳು ನಡೆಯದಿರುವುದರಿಂದ ಪರಿಸರದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದ್ದು. ಆಡಳಿತ ವ್ಯವಸ್ಥೆಗಳು ತಕ್ಷಣ ಅಪಾಯದ ಸ್ಥಿತಿಯಲ್ಲಿ ಇರುವ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕಾಗಿದೆ