ಉಡುಪಿ : ಇಂದು ಮೂರು ಹೊರೆಕಾಣಿಕೆ ಮೆರವಣಿಗೆ

ಉಡುಪಿ : ಕರ್ಫ್ಯೂ ಕಾರಣಕ್ಕೆ ಜನವರಿ 15 ಮತ್ತು 16 ರಂದು ರದ್ದಾಗಿದ್ದ ಮೂರು ಹೊರೆಕಾಣಿಕೆ ಮೆರವಣಿಗೆಗಳು ಇಂದು ನಡೆಯಲಿವೆ.

ಬೆಳಿಗ್ಗೆ 10 ಕ್ಕೆ ಮಟ್ಟು ಗುಳ್ಳ ಬೆಳೆಗಾರರಿಂದ ಮತ್ತು ಕೃಷ್ಣಾಪುರ ಗ್ರಾಮದ ಭಕ್ತರಿಂದ ಸಂಸ್ಕೃತ ಕಾಲೇಜಿನಿಂದ ಹೊರೆ ಕಾಣಿಕೆ ಅರ್ಪಣೆಯಾಗಲಿದೆ.

ಮಧ್ಯಾಹ್ನ 3 ಕ್ಕೆ ಜೋಡು ಕಟ್ಟೆಯಿಂದ ಕಟೀಲು ಮೂಡಬಿದ್ರೆ ಭಕ್ತರಿಂದ ಹೊರಕಾಣಿಕೆ ಸಮರ್ಪಿಸಲಾಗುವುದು. ಸಂಜೆ 5 ಕ್ಕೆ ಜೋಡುಕಟ್ಟೆಯಿಂದ ಕೃಷ್ಣಮೂರ್ತಿ ಆಚಾರ್ಯರ ನೇತೃತ್ವದಲ್ಲಿ ಕನ್ನರ್ಪಾಡಿ ಕಿನ್ನಿಮೂಲ್ಕಿ ಪ್ರದೇಶದ ಭಕ್ತರಿಂದ ಹೊರೆಕಾಣಿಕೆ ಅರ್ಪಣೆಯಾಗಲಿದೆ.

 
 
 
 
 
 
 
 
 
 
 

Leave a Reply