ಉಡುಪಿ : ಅಗತ್ಯ ವಸ್ತುಗಳ ಬೆಲೆ ಎರಿಕೆ ಬಗ್ಗೆ ಸಿಐಟಿಯು ಪ್ರತಿಭಟನೆ

ಉಡುಪಿ : ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಕರ್ನಾಟಕ ರಾಜ್ಯ ಸಮಿತಿಯು ಅಗತ್ಯ ವಸ್ತುಗಳ ಬೆಲೆ ಎರಿಕೆ ಹಾಗೂ ಇತರ ಕಾರ್ಮಿಕ ಸಮಸ್ಯೆ ಬಗ್ಗೆ ಇಂದು ರಾಜ್ಯಾದ್ಯಂತ ತಾಲೂಕು ಕಛೇರಿ ಮುಂದೆ ಪ್ರತಿಭಟನೆಗೆ ಕರೆ ನೀಡಿದ್ದು ಉಡುಪಿಯಲ್ಲಿ ಸಿಐಟಿಯು ಉಡುಪಿ ತಾಲೂಕು ಸಮಿತಿ ನೇತ್ರತ್ವದಲ್ಲಿ ಬನ್ನಂಜೆ ತಹಶಿಲ್ದಾರರ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಸಿಐಟಿಯು ನ ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು, ಸಿಐಟಿಯು ಜಿಲ್ಲಾ ಖಂಜಾಚಿ ಶಶಿಧರ್ ಗೊಲ್ಲ,ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸುಂದರ್ ಮಾಸ್ಟರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಉಡುಪಿ ಕಟ್ಟಡ ಸಂಘದ ಮುಖಂಡ ವಾಮನ ಪೂಜಾರಿ ಪಡುಬಿದ್ರಿ,ಸುಭಾಷ್ ನಾಯಕ್ ಬ್ರಹ್ಮವಾರ,ಉದಯ ಪೂಜಾರಿ ಉಪ್ಪೂರು,ಉಡುಪಿ ಬೀಡಿ ಸಂಘದ ಮುಖಂಡ ಉಮೇಶ್ ಕುಂದರ್,ನಳಿನಿ,ಸಂಜೀವ ನಾಯಕ್,ಗಿರಿಜಾ, ಉಪಸ್ಥಿತರಿದ್ದರು. ಸಿಐಟಿಯು ಉಡುಪಿ ತಾಲೂಕು ಅಧ್ಯಕ್ಷ ರಾಮ ಕಾರ್ಕಡ ಸ್ವಾಗತಿಸಿ, ಸಿಐಟಿಯು ಉಡುಪಿ ತಾಲೂಕು ಕಾರ್ಯದರ್ಶಿ ಕವಿರಾಜ್. ಎಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply