ಕಟಪಾಡಿಯ ಶ್ರೀವಿಶ್ವನಾಥ ಕ್ಷೇತ್ರದಲ್ಲಿ ಕೋಟಿ ಗೀತಾ ಲೇಖನ ಯಜ್ಞಕ್ಕೆ ಚಾಲನೆ

ಕಟಪಾಡಿಯ ಶ್ರೀವಿಶ್ವನಾಥ ಕ್ಷೇತ್ರದಲ್ಲಿ ಕೋಟಿ ಗೀತಾ ಲೇಖನ ಯಜ್ಞಕ್ಕೆ ಚಾಲನೆ. ಕ್ಷೇತ್ರದ ಅಧ್ಯಕ್ಷರಾದ ಶ್ರೀ ಶಂಕರ ಪೂಜಾರಿಯವರು ಶ್ರೀ ನಾರಾಯಣ ಗುರುಗಳ ಜಯಂತಿ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳವರ ಚತುರ್ಥ ಪರ್ಯಾಯದ ಯೋಜನೆಯಾದ ಕೋಟಿ ಗೀತಾ ಲೇಖನದ ಯಜ್ಞಕ್ಕೆ ವಿಶೇಷ ಪ್ರಾರ್ಥನೆ ಮೂಲಕ ಶ್ರೀಗಳವರ ಈ ಕಾರ್ಯಕ್ರಮ ಯಶಸ್ಸನ್ನು ಹೊಂದಲಿ, ಹಾಗೂ ನಮ್ಮ ಕ್ಷೇತ್ರದ ಭಕ್ತರೆಲ್ಲರೂ ಸಹಕಾರ ನೀಡುವುದಾಗಿ ಭರವಸೆಯಿತ್ತು ಸಾಂಕೇತಿಕವಾಗಿ ಈ ಯಜ್ಞಕ್ಕೆ ಚಾಲನೆ ನೀಡಿ ಗೀತಾ ಲೇಖನ ದೀಕ್ಷೆಯನ್ನು ಪಡೆದರು . ಶ್ರೀಗಳಿಂದ ನಿಯೋಜಿತ ಪ್ರದ್ಯುಮ್ನ ತಂಡದ ಗೀತಾ ಪ್ರಚಾರಕರಾದ ಶ್ರೀ ರಮೇಶ್ ಭಟ್ ಕೆ, ಶ್ರೀ ಸುರೇಶ್ ಕಾರಂತ್, ಗೀತಾ ಮಾತೆ ಶ್ರೀಮತಿ ನಂದಿನಿ ಶೆಣೈ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply