ಸಿಂಗಾರದಿಂದ ಶೃಂಗಾರ ಮಾಲೆ ಪ್ರಾತ್ಯಕ್ಷಿಕೆ

ಕಲ್ಯಾಣಿ ಕಲಾ ಕೇಂದ್ರ ಸುಬ್ರಹ್ಮಣ್ಯನಗರ ಇದರ ಆಶ್ರಯದಲ್ಲಿ ದಿನಾಂಕ 07-08-22 ರಂದು ಉಡುಪಿ ಸುಬ್ರಹ್ಮಣ್ಯ ನಗರದ ಅರಿತೋಡು ಶ್ರೀ ಜನಾರ್ದನ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಕಲ್ಯಾಣಿ ಕಲಾ ಕೇಂದ್ರದ ಅಧ್ಯಕ್ಷರಾದ ಶ್ರೀ ನಿರಂಜನ್ ಭಟ್ ಮುನ್ನೂರು ಇವರಿಂದ ಕುಶದಿಂದ ಸಿಂಗಾರ ಹೂವಿನ ಮಾಲೆ ತಯಾರಿಸುವ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು. ಅರಿತೋಡು ದೇವಸ್ಥಾನದ ಅರ್ಚಕರಾದ ಶ್ರೀ ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯಾಯ ಇವರು ದೀಪಬೆಳಗಿಸಿ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಪುತ್ತೂರು ವಲಯ ಬ್ರಾಹ್ಮಣ ಮಹಾಸಭದ ಅಧ್ಯಕ್ಷರಾದ ಶ್ರೀ ದುರ್ಗಾಪ್ರಸಾದ್, ಕಲ್ಯಾಣಿ ಕಲಾ ಕೇಂದ್ರದ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಜೋಶಿ, ಕೋಶಾಧಿಕಾರಿ ಕುಮಾರಿ ಆದ್ಯತಾ ಮತ್ತು ಶ್ರೀ ಪ್ರಕಾಶ ಅಮ್ಮಣ್ಣಾಯರವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply