ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನ ಪಡು ಕುತ್ಯಾರು ವತಿಯಿಂದ ಆಗಸ್ಟ್ 9ರ ಸೋಮವಾರ ಹಾಗೂ 10ರ ಮಂಗಳವಾರ, ಪಡುಕುತ್ಯಾರು ಮಠದಲ್ಲಿ ದಾನಿಗಳ ಪ್ರಾಯೋಜಕತ್ವದಲ್ಲಿ 18 ವರ್ಷ ಮೇಲ್ಪಟ್ಟ ಸಮಾಜದ ನಾಗರಿಕರಿಗೆ ಸುಮಾರು 2500 ದಿಂದ 3000 ಜನರಿಗೆ ಉಚಿತವಾಗಿ ಬೃಹತ್ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕೋವಿಡ್ ಸುರಕ್ಷಾ ನಿಯಮಗಳನ್ನು ಪಾಲಿಸಿಕೊಂಡು ವ್ಯವಸ್ಥಿತ ವೈದ್ಯಕೀಯ ತಂಡದೊಂದಿಗೆ 9 ಗುಂಪುಗಳಲ್ಲಿ ಲಸಿಕೆಯನ್ನು ನೀಡಲಾಗುವುದು. ಲಸಿಕೆಯನ್ನು ತೆಗೆದುಕೊಳ್ಳಲು ಬಯಸುವವರು ತಮ್ಮ ತಮ್ಮ ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ಖಡ್ಡಾಯವಾಗಿ ತರಬೇಕು.
ಈ ಬೃಹತ್ ಕೋವಿಡ್-19 ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆಯನ್ನು ತೆಗೆದುಕೊಳ್ಳಲು ಇಚ್ಚಿಸುವವರು ಖಡ್ಡಾಯವಾಗಿ ಈ ಕೆಳಗೆ ನೀಡಿರುವ ವ್ಯಕ್ತಿಗಳನ್ನು ಸಂಪರ್ಕಿಸಿ ತಮ್ಮ ಹೆಸರನ್ನು ಖಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ
1.ದಿನೇಶ್ ಆಚಾರ್ಯ – 9448114566
2.ಲೋಲಾಕ್ಷ್ ಶರ್ಮಾ – 9740663327
3.ಗುರುರಾಜ್ ಆಚಾರ್ಯ – 9591390124
4.ಸುಂದರ ಆಚಾರ್ಯ – 9448159818
5.ಲತಾ ಎಸ್ ಆಚಾರ್ಯ – 9972672383