ಉಡುಪಿ : ಸ್ವಯಂ ವೈದ್ಯ ಶಿಬಿರಕ್ಕೆ ಚಾಲನೆ

ಉಡುಪಿ : ಗೋ ಸೇವಾ ಗತಿ ವಿಧಿ, ಪುಣ್ಯಕೋಟಿ ಗೋ ಸೇವಾ ಕೇಂದ್ರ ಹಾಗೂ ಜಿ ಎಸ್ ಬಿ ಸಭಾ ಉಡುಪಿ, ಸಹಯೋಗದೊಂದಿಗೆ ಸ್ವಯಂ ವೈದ್ಯ ಶಿಬಿರಕ್ಕೆ ಪದ್ಮಾವತಿ ಕಲ್ಯಾಣ ಮಂಟಪ ದಲ್ಲಿ ಚಾಲನೆ ನೀಡಲಾಯಿತು. 

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಡುಪಿ ಜಿಲ್ಲಾ ಸಂಚಾಲಕ ಡಾ. ನಾರಾಯಣ. ಶೆಣೈ , ನಗರ ಸಂಚಾಲಕ ರಾಮಚಂದ್ರ ಸನಿಲ್, ವಿದ್ವಾಂಸ ಕೃಷ್ಣರಾಜ ಕುತ್ಪಾಡಿ, ಗೋ ಸೇವಕ ವಿಠ್ಠಲದಾಸ್ ನಾಯಕ್, ಪುಣ್ಯಕೋಟಿ ಗೋ ಶಾಲೆಯ ಮುಖ್ಯಸ್ಥ ಗಣೇಶ್ ನಾಯಕ್ ಶಿರಿಯಾರ, ಜಿ ಎಸ್ ಬಿ ಸಭಾ ಉಡುಪಿಯ ಪ್ರಮುಖ ಪ್ರತೀಕ್ ಕಾಮತ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಭಕ್ತಿ ಭೂಷಣ ಗುರೂಜಿ ಸ್ವಯಂ ವೈದ್ಯ ನಾಡಿ ಚಿಕಿತ್ಸಾ ಶಿಬಿರ ನಡೆಸಿದರು. ಶಿರಿಯಾರ ಗಣೇಶ್ ನಾಯಕ್ ಪ್ರಸ್ತಾವಿಸಿ, ಪಲ್ಲವಿ ಭಟ್ ರವರು ಸ್ವಾಗತಿಸಿ ಶಕುಂತಲಾ ಶೆಣೈ ನಿರೂಪಿಸಿದರು.

 
 
 
 
 
 
 
 
 

Leave a Reply