ಪೆಂಡಾಲ್ ಹಾಕುವ ವಿಚಾರದಲ್ಲಿ ಗಲಾಟೆ; ಕೋಪಗೊಂಡು ರಿಕ್ಷಾಕ್ಕೆ ಬೆಂಕಿ ಹಚ್ಚಿದ ಯುವಕ!

ಉಡುಪಿ: ಪೆಂಡಾಲ್‌ ಹಾಕುವ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ಮಧ್ಯೆ ನಡೆದ ಗಲಾಟೆ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂಬ ದ್ವೇಷದಲ್ಲಿ ನೆರೆಮನೆಯಾತ ರಿಕ್ಷಾಕ್ಕೆ ಬೆಂಕಿ ಹಚ್ಚಿರುವ ಘಟನೆ ಸೋಮವಾರ ರಾತ್ರಿ ವೇಳೆ ಉಡುಪಿ ಪುತ್ತೂರು ಗ್ರಾಮದ ಹನುಮಂತ ನಗರ ಎಂಬಲ್ಲಿ ನಡೆದಿದೆ.

ಹನುಮಂತ ನಗರದ ದಿವಾಕರ ಬೆಳ್ಳಡ ಎಂಬವರ ಪತ್ನಿ ಜೊತೆ ನೆರೆಮನೆಯ ಖಲೀಂ ಎಂಬಾತ ಜಗಳ ಮಾಡಿದ್ದ. ಬಳಿಕ ಆತ ದಿವಾಕರ್ ಅವರ ಮನೆಯ ಮಾಡಿಗೆ ಇಂಟರ್ಲಾಕ್ ತುಂಡು ಎಸೆದು ಹೆಂಚಿಗೆ ಹಾನಿಗೈದಿದ್ದನು. ಈ ಬಗ್ಗೆ ದಿವಾಕರ್, ಪೊಲೀಸರಿಗೆ ದೂರು ನೀಡಿದ್ದರು.

ಕಲ್ಲೆಸೆದ ಘಟನೆ ನಡೆದಾಗ ಸ್ಥಳಕ್ಕೆ ಉಡುಪಿ ಪೊಲೀಸ್ ರ ಬಂದು ವಾರ್ನಿಂಗ್ ನೀಡಿ ತೆರಳಿದ್ದರು. ಪೊಲೀಸರು ವಾಪಾಸ್ ತೆರಳಿದ ಬಳಿಕ, ಇದೇ ವಿಚಾರದಲ್ಲಿ ದ್ವೇಷಗೊಂಡ ಖಲೀಂ, ದಿವಾಕರ್ ಅವರ ಮನೆ ಎದುರು ನಿಂತಿದ್ದ ರಿಕ್ಷಾಕ್ಕೆ ಡೀಸೆಲ್ ಹಾಕಿ ಬೆಂಕಿ ಹಚ್ಚಿದ್ದಾನೆ. ಬಳಿಕ ಅಲ್ಲಿಂದ ಓಡಿ ಹೋಗಿದ್ದಾನೆ. ಸ್ಥಳೀಯರು ನೀರು ಹಾಕುವಷ್ಟರಲ್ಲಿ ರಿಕ್ಷಾ ಬೆಂಕಿಗೆ ಅಹುತಿಯಾಗಿದೆ.

ಇದರಿಂದ ರಿಕ್ಷಾದ ಟಾಪ್ ಹಾಗೂ ಹಿಂಭಾಗ ಸಂಪೂರ್ಣ ಸುಟ್ಟುಹೋಗಿದ್ದು, ಇದರಿಂದಾಗಿ ಸುಮಾರು 1 ಲಕ್ಷರು. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ಗಾಂಜಾ ಸೇವಿಸಿ ದಾಂಧಲೆ ನಡೆಸಿದ್ದಾನೆಂದು ಆರೋಪಿಸಲಾಗಿದೆ.

 
 
 
 
 
 
 
 
 
 
 

Leave a Reply