ಸಮುದಾಯ ವೈದ್ಯಕೀಯ ವಿಭಾಗ ಕೆ ಎಮ್ ಸಿ ಮಣಿಪಾಲ ಮತ್ತು ಜಿಲ್ಲಾ ಸರ್ವೇಕ್ಷಣಾ ಘಟಕ ಇವರ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿ ಕಾರಿಗಳು ಶುಶ್ರುಷಕ/ ಕಿಯರಿಗೆ ಅಸಾಂಕ್ರಮಿಕ ರೋಗಗಳ ಜನಸಂಖ್ಯಾ ಆಧಾರಿತ ತಪಾಸಣೆ ವಿಷಯದ ಬಗ್ಗೆ ಜಿಲ್ಲಾ ಎನ್ ಸಿ ಡಿ ಘಟಕ ಮತ್ತು ಸಮುದಾಯ ವೈದ್ಯಕೀಯ ವಿಭಾಗದ ಜೊತೆಗೆ 3 ದಿನದ ಕಾರ್ಯಾಗಾರ ಆಯೋಜಿಸಲಾಗಿದೆ.
ಈ ಕಾರ್ಯಾಗಾರದಲ್ಲಿ ಸ್ವಸಹಾಯ ಆಧಾರಿತ ಮೌಲ್ಯಮಾಪನ /ತಪಾಸಣೆ ಬಗ್ಗೆ ಸಂಕ್ಷಿಪ್ತ ದೃಷ್ಟಿಕೋನ ನೀಡಲಾಯಿತು. ಇತೀಚಿನ ದಿನಗಳಲ್ಲಿ ಅಸಾಂಕ್ರಾಮಿಕ ರೋಗಗಳಾದ ರಕ್ತದೊತ್ತಡ ಮಧುಮೇಹ ಕ್ಯಾನ್ಸರ್ ನಂತಹ ರೋಗಗಳು ಭಯಾನಕ ರೂಪ ಪಡೆಯುತ್ತಿದ್ದು ಪ್ರತಿವರ್ಷ ಇವುಗಳಿಂದ ಸಾವಿನ ಸಂಖ್ಯೆ ಸಾಂಕ್ರಮಿಕ ರೋಗಗಳಿಗಿಂತಲೂ ವೇಗವಾಗಿ ಏರುತಿರುವುದು.
ಸಾಂಕ್ರಾಮಿಕ ರೋಗಗಳು ಬರುವುದನ್ನು ಕಂಡುಕೊಳ್ಳಬಹುದು. ಆದರೆ ಅಸಾಂಕ್ರಾಮಿಕರೋಗಗಳು ಯಾವಾಗ ಯಾರಿಗೆ ಬರುವುದು ತಿಳಿಯುದಿಲ್ಲ. ಆದ್ದರಿಂದ ನಾವು ಸಾಂಕ್ರಾಮಿಕ ರೋಗಗಳಿಗೆ ಕೊಡುತ್ತಿರುವಷ್ಟೇ ಪಾಮುಖ್ಯತೆಯನ್ನು ಅಸಾಂಕ್ರಮಿಕ ರೋಗಗಳಿಗೂ ನೀಡ ಬೇಕಾಗಿದೆ ಎಂದು ಈ ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು.
ಈ ಕಾರ್ಯಾಗಾರದಲ್ಲಿ ಡಾ.ಶರತ್ ರಾವ್ ಡಿನ್ ಕೆ ಎಂ ಸಿ ಮಣಿಪಾಲ, ಡಾ.ಸುಮ ನಾಯರ್, ಡಾ.ಅವಿನಾಶ್ ಶೆಟ್ಟಿ ವೈದ್ಯಕೀಯ ಅಧಿಕ್ಷಕರು ಕಸ್ತೂರ್ಭಾ ಆಸ್ಪತ್ರೆ ಮಣಿಪಾಲ ಡಾ.ಮಂಜುನಾಥ್ ಹಂದೆ, ಡಾ.ಶಶಿಕಿರಣ್, ಡಾ.ಅರವಿಂದ್ ಪ್ರಭು, ಡಾ.ಸಹನಾ ಶೆಟ್ಟಿ, ಡಾ.ವಾಸುದೇವ್ ಭಟ್, ಮತ್ತು ಉಡುಪಿ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ವಾಸುದೇವ್ ಭಾಗವಹಿಸಿದರು.
ಈ ಕಾರ್ಯಾಗಾರವು ದಿನಾಂಕ 12 , 16 ಮತ್ತು 17 ರಂದು ಡಾ.ಟ್.ಎಂ. ಎ ಪೈ ಸಭಾಭವನ ಕೆ.ಎಮ್.ಸಿ ಮಣಿಪಾಲದಲ್ಲಿ ನಡೆಯುತಿದೆ.