ಗರ್ಭಾಶಯ ಕೊರಳಿನ ಕ್ಯಾನ್ಸರ್ ಬಗ್ಗೆ ಜಾಗೃತಿ ಸಪ್ತಾಹ ಹಾಗೂ ಉಚಿತ ತಪಾಸಣಾ ಶಿಬಿರ

ಉಡುಪಿ: ಗರ್ಭಾಶಯ ಕೊರಳಿನ ಕ್ಯಾನ್ಸರ್ ಬಗ್ಗೆ ಜಾಗೃತಿ ಸಪ್ತಾಹ ಹಾಗೂ ಉಚಿತ ತಪಾಸಣಾ ಶಿಬಿರವು ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಆಸ್ಪತ್ರೆ, ಕುತ್ಪಾಡಿ, ಉಡುಪಿ ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಆಸ್ಪತ್ರೆ, ಕುತ್ಪಾಡಿ, ಉಡುಪಿ ಇದರ ಪ್ರಸೂತಿ ತಂತ್ರ  ಸ್ತ್ರೀ  ರೋಗ ವಿಭಾಗದ ವತಿಯಿಂದ ನಡೆಯಲಿದೆ.

ಫೆ. 1ರಿಂದ 7ರ ವರೆಗೆ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಆಸ್ಪತ್ರೆಯ ಆವರಣದಲ್ಲಿ ಗರ್ಭಾಶಯ ಕೊರಳಿನ ಕ್ಯಾನ್ಸರ್ ಬಗ್ಗೆ ಜಾಗೃತಿ ಸಪ್ತಾಹ ಹಾಗೂ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಅವಕಾಶದ ಸದುಪಯೋಗವನ್ನು ೩೫ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರು ಪಡೆದುಕೊಳ್ಳಬಹುದು ಹಾಗೆ ಸಾರ್ವಜನಿಕರು  ಸದುಪಯೋಗ ಪಡೆಯಬೇಕೆಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ . ಫೋನ್ ಸಂ : 0820-2533301,2533302,2533303  ಸಂಪರ್ಕಿಸಬಹುದು.

 
 
 
 
 
 
 
 
 
 
 

Leave a Reply