ಇಂದು ಕೇರಾಡಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಜಿಲ್ಲಾ ಪಂಚಾಯತ್ ಉಡುಪಿ , ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಗಣೇಶ ಗಂಗೊಳ್ಳಿ ಬಳಗದವರಿಂದ ಜಾನಪದ ಕಲಾ ಪ್ರದರ್ಶನ ಮತ್ತು ಬೀದಿನಾಟಕದ ಮೂಲಕ ಆರೋಗ್ಯ ಶಿಕ್ಷಣ ಅರಿವು ಕಾರ್ಯಕ್ರಮ ನಡೆಯಿತು.
ತಾಯಿ ಮಗುವಿನ ಆರೋಗ್ಯ ಮತ್ತು ಕರೋನ ವೈರಸ್ ಕುರಿತು, ಕ್ಷಯ ರೋಗದ ಕುರಿತು ಬೀದಿ ನಾಟಕ ಹಾಗೂ ಹಾಡುಗಳ ಮೂಲಕ ಜನ ಜಾಗ್ರತಿ ಮೂಡಿಸಲಾಯಿತು. ಕೆರಾಡಿಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಕಾರಿ ಶ್ರಿ ಗುರು ಮೂರ್ತಿ ಬಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಖೆ ಕುಂದಾಪುರ ಇದರ ಮೇಲ್ವಿಚಾರಕಿ ಶ್ರೀಮತಿ ಸುಮಾ ಹಾಗೂ ಕೆರಾಡಿಯ ಪ್ರಾರ್ಥಮೀಕ ಆರೋಗ್ಯ ಕೇಂದ್ರದ ಶ್ರೀಮತಿ ಶೃತಿ ಉಪಸ್ಥಿತರಿದ್ದರು.