ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಸೇರಿದಂತೆ ಇನ್ನಿತರ ಸಂಘಟನೆಗಳಿಂದ ಆಶಾ ಕಾರ್ಯಕರ್ತೆಯರಿಗೆ ಗೌರವ

ಬಾರ್ಕೂರು : ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಹಾಗೂ ಬಿಲ್ಲವ ಸೇವಾ ಸಂಘ (ರಿ)ಬಾರ್ಕೂರು ಇವರ ಆಶ್ರಯದಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳಾದ ರೋಟರಿ ಕ್ಲಬ್ (ರಿ ), ನಮ್ಮೂರು ಬಾರ್ಕೂರು ಫೇಸ್ಬುಕ್ ಗ್ರೂಪ್, ಕೊರೋನಾ ಸಂಕಷ್ಟ ಸಮಯದಲ್ಲಿ ಸಮಾಜಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಬಿ. ಸಿ ಟ್ರಸ್ಟ್ ವಿಪತ್ತು ನಿರ್ವಹಣಾ ಘಟಕ ಬಾರ್ಕೂರು ಇದರ ಸದಸ್ಯರನ್ನು ಮತ್ತು ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಗುರುವಾರ ನಡೆಸಲಾಯಿತು.

ರೋಟರಿ ಕ್ಲಬ್(ರಿ )ಬಾರ್ಕೂರಿನ ಪರವಾಗಿ ನಿಕಟಪೂರ್ವ ಅಧ್ಯಕ್ಷ ರೋಟೇರಿಯನ್ ವಾಸುದೇವ ಶೆಟ್ಟಿ ಹಾಗೂ ಪ್ರಸ್ತುತ ಅಧ್ಯಕ್ಷ ರೋಟೇರಿಯನ್ ಚರಣ್. ಬಿ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಪತ್ತು ನಿರ್ವಹಣಾ ಘಟಕ ಬಾರ್ಕೂರಿನ ಪರವಾಗಿ ಮಂಜುನಾಥ ಪೂಜಾರಿ ಹೊಸಾಳ ಮತ್ತು ವಿಮಲ್ ಕುಮಾರ್ ಹೊಸಾಳ, ನಮ್ಮೂರು ಬಾರ್ಕೂರು ಫೇಸ್ಬುಕ್ ಗ್ರೂಪ್ ನ ಪರವಾಗಿ ಆನಂದ್ ಕುಮಾರ್ ಬಾರ್ಕೂರು ಮತ್ತು ಬಾರ್ಕೂರಿನ ಹಿರಿಯ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿರುವ ಬಿ. ಸುಧಾಕರ ರಾವ್ ಹಾಗೂ ಬಾರ್ಕೂರಿನ ವ್ಯಾಪ್ತಿಯಲ್ಲಿನ ಆಶಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು.

ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘ(ನಿ)ದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು,ಸಿಬ್ಬಂದಿ ವರ್ಗ ಮತ್ತು ಬಾರಕೂರು ಬಿಲ್ಲವ ಸೇವಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply