ಉಡುಪಿ: ರೋಟರಿ ಉಡುಪಿ ಪ್ರಾಯೋಜಿತ ಹೊಸ ರೋಟರಾಕ್ಟ ಕ್ಲಬ್ ಅನ್ನು ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ರೋಟರಿ ಜಿಲ್ಲಾಗವರ್ನರ್ ರಾಜಾರಾಮ ಭಟ್ ಬೆಳಗಿಸಿ ಉದ್ಘಾಟಿಸಿದರು.
ನೂತನ ಶ್ರೀ ಕೃಷ್ಣ ರೋಟರಾಕ್ಟ ಕ್ಲಬ್ ನ ಪ್ರಥಮ ಅಧ್ಯಕ್ಷೆಯಾಗಿ ಶೃತಿ ಶೆಣೈ ಪ್ರತಿಜ್ಞೆ ಸ್ವೀಕರಿಸಿದರು. ಜಿಲ್ಲಾ ರೋಟರಾಕ್ಟ್ ಸಭಾಪತಿ ರೋ.ಮಂಜುನಾಥ ಉಪಾಧ್ಯಾಯ, ಸಹಾಯಕ ಗವರ್ನರ್ ರೋ. ಆನಂದ ಉದ್ಯಾವರ್, ರೋಟರಿ ಅಧ್ಯಕ್ಷೆ ರೋ.ರಾಧಿಕಾ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ರೋ.ದೀಪಾ ಭಂಡಾರಿ, ರೋಟರಾಕ್ಟ ಸಭಾಪತಿ ರೋ. ಗುರುರಾಜ ಭಟ್ ಶುಭ ಹಾರೈಸಿದರು. ರೋಟರಾಕ್ಟ ಕ್ಲಬ್ ನ ಉಪಾಧ್ಯಕ್ಷೆಯಾಗಿ ಜ್ಯೋತಿ, ಕಾರ್ಯದರ್ಶಿ ಮೇಘನಾ, ಜತೆ ಕಾರ್ಯದರ್ಶಿ ತ್ರಿವೇಣಿ, ಸಾರ್ಜೆಂಟ್ ಎಟ್ಆರ್ಮ್ಸ ಆಗಿ ತನ್ವಿ ಮತ್ತು ಶ್ರೀ ಹರಿ, ವೃಷಕ್, ಅರ್ಪಿತಾ ಅವರು ನಿರ್ದೇಶಕ ರಾಗಿ ಅಧಿಕಾರ ಸ್ವೀಕರಿಸಿದರು.