ಕಲಾವಿದರಿಗೆ ಸಹಾಯಧನ ವಿತರಣೆ

ಕಲಾರಂಗದ ಕಛೇರಿಯಲ್ಲಿ ಜರಗಿದ ಸಭೆಯಲ್ಲಿ ಕರೋನಾ ಕಾರಣದಿಂದ 2020-21ನೇ ಸಾಲಿನ ತಿರುಗಾಟ ಸಂದರ್ಭದಲ್ಲಿ ಭಾಗಶಃ ಸಂಭಾವನೆ ಪಡೆದ 409 ಕಲಾವಿದರ ಖಾತೆಗೆ ತಲಾ ರೂ. 2500/- ರಂತೆ (ಒಟ್ಟು ರೂ. 10,22,500) ಸಹಾಯಧನ ವಿತರಣೆ ಉಡುಪಿ ಶಾಸಕ ಶ್ರೀ ಕೆ. ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಜರಗಿತು.

ಅಭ್ಯಾಗತರಾಗಿ ಶ್ರೀ ಪಣಂಬೂರು ವಾಸುದೇವ ಐತಾಳ್ ಹಾಗೂ ಸಿ.ಎ. ಗಣೇಶ್ ಕಾಂಚನ್ ಪಾಲುಗೊಂಡರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಪಾಲುಗೊಂಡಿದ್ದರು.

ಸಾಂಕೇತಿಕವಾಗಿ ಸಾಲಿಗ್ರಾಮ ಮೇಳದ ಸ್ತ್ರೀವೇಷಧಾರಿ ಶಶಿಕಾಂತ ಶೆಟ್ಟಿ, ಬಪ್ಪನಾಡು ಮೇಳದ ಭಾಗವತ ಶ್ರೀ ಗಣೇಶ್ ಕುಮಾರ್ ಹೆಬ್ರಿ ಹಾಗೂ ಯಕ್ಷಶಿಕ್ಷಣ ಗುರು ಶ್ರೀ ಕೃಷ್ಣಮೂರ್ತಿ ಭಟ್ ಬಗ್ವಾಡಿ ಇವರಿಗೆ ಚೆಕ್ ವಿತರಿಸಲಾಯಿತು.

ಈ ಯೋಜನೆಗೆ ವಿಶೇಷ ಆರ್ಥಿಕ ನೆರವು ನೀಡಿದ ಶ್ರೀಮತಿ ಆಶಾ ರಾಘವೆಂದ್ರ, ಶ್ರೀ ಎಚ್. ಎಸ್. ಶೆಟ್ಟಿ, ಡಾ. ಚಂದ್ರಶೇಖರ ದಾಮ್ಲೆ, ಸಿ.ಎ ಗಣೇಶ್ ಕಾಂಚನ್, ಎನ್. ವಿನಯ ಹೆಗ್ಡೆ ಹಾಗೂ ಎಲ್ಲಾ ಧಾನಿಗಳನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಲಾಯಿತು.

 
 
 
 
 
 
 
 
 
 
 

Leave a Reply