ಡಾ।ವಿರೂಪಾಕ್ಷ ದೇವರಮನೆ ಅವರ ಎರಡು ಪುಸ್ತಕ ಲೋಕಾರ್ಪಣೆ

ಉಡುಪಿ : ಡಾ।ವಿರೂಪಾಕ್ಷ ದೇವರಮನೆ ಅವರ ‘ಡಿಡ್ ಯು ಟಾಕ್ ಟು ಯುವ‌ರ್ ಚೈಲ್ಡ್ ಟುಡೇ’ ಹಾಗೂ ‘ಕಣ್ಣಿಗೆ ಕಾಣುವ ದೇವರು’ ಪುಸ್ತಕ ಲೋಕಾರ್ಪಣೆ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಿತು.ಹಿರಿಯ ತೆಲುಗು ಸಾಹಿತಿ ಯಂಡಮೂರಿ ವೀರೇಂದ್ರನಾಥ್ ‘ಡಿಡ್ ಯು ಟಾಕ್ ಟು ಯುವರ್ ಚೈಲ್ಡ್ ಟುಡೇ’ ಮತ್ತು ‘ಕಣ್ಣಿಗೆ ಕಾಣುವ ದೇವರು’ ಪುಸ್ತಕವನ್ನು ಮಾಸ್ಟರ್ ಅಫಾನ್ ಕುಟ್ಟಿ ಬಿಡುಗಡೆ ಗೊಳಿಸಿದರು.

ಯಂಡಮೂರಿ ವೀರೇಂದ್ರನಾಥ್ ‘ಪೋಷಕರು ಆರು ಬಗೆ; ನೀವ್ಯಾರು?” ಕುರಿತು ವಿಶೇಷ ಉಪನ್ಯಾಸ ನೀಡಿದರು. ರೂಬಿಕ್ ಕ್ಯೂಬ್‌ನಲ್ಲಿ ಗಿನ್ನೆಸ್‌ ದಾಖಲೆ ಮಾಡಿರುವ ಮಾಸ್ಟರ್ ಅಫಾನ್ ಕುಟ್ಟಿ ಅವರಿಂದ ‘ಅಂತರ್ಜಾಲ ವ್ಯಸನದಿಂದ ರೂಬಿಕ್ಸ್ ಕ್ಯೂಬ್ ಇಂದ್ರಜಾಲದತ್ತ’ ಎಂಬ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಮಾಸ್ಟರ್ ಅಫಾನ್ ಕುಟ್ಟಿ ಕಣ್ಣಿಗೆ ಬಟ್ಟೆ ಕಟ್ಟಿ ಕ್ಯೂಬಿಕ್ಸ್ ಮೂಲಕ ಯಂಡಮೂರಿಯವರ ಸುಂದರ ಚಿತ್ರ ಬಿಡಿಸಿ  ಮೆಚ್ಚುಗೆಗೆ ಪಾತ್ರವಾದರು. ಡಾ । ಪಿವಿ ಭಂಡಾರಿ, ಸಾವಣ್ಣ ಪ್ರಕಾಶನದ ಜಮೀಲ್,  ಅಮಿತಾ ಪೈ ಉಪಸ್ಥಿತರಿದ್ದರು. ಲೇಖಕ ದಾ । ವಿರೂಪಾಕ್ಷ ದೇವರಮನೆ ಪ್ರಸ್ತಾಪಿಸಿದರು. ಡಾ. ವೀಣಾ ವಿರೂಪಾಕ್ಷ ಸ್ವಾಗತಿಸಿದರು.       

 
 
 
 
 
 
 
 
 
 
 

Leave a Reply