1. ಮೋದಕ: ಮೈದಾ 2 ಲೋಟ, ಸಕ್ಕರೆ 1ವರೆ ಲೋಟ, ಒಣಕೊಬ್ಬರಿ ಒಂದು, ಸ್ವಲ್ಪ ಏಲಕ್ಕಿ ಪೌಡರ್, ತುಪ್ಪ ಅಥವಾ ಎಣ್ಣೆ ಅರ್ಧ ಲೀಟರ್. .ದು ಪಾತ್ರೆಗೆ ಮೈದಾಹಿಟ್ಟು, ಚೂರು ಉಪ್ಪು, ತುಪ್ಪ ಎರಡು ಚಮಚಹಾಕಿ ಮೊದಲು ಕಲಸಿ, ನಂತರ ಚೂರು ಚೂರು ನೀರು ಹಾಕಿ ಮೃದುವಾದ ಉಂಡೆ ಮಾಡಿ, ನಂತರ ಮತ್ತೊಂದು ಬಾಣಲಿಯಲ್ಲಿ ಕೊಬ್ಬರಿ ತುರಿದು, ಸಕ್ಕರೆ ಮತ್ತು ಏಲಕ್ಕಿ ಪುಡಿ ಹಾಕಿ ಕಲಸಿ ಹೂರಣ ತಯಾರಿ ಮಾಡಿ, ಆಗ ಕಲಸಿದ ಮೈದಾದಿಂದ ಸಣ್ಣಸಣ್ಣ ಉಂಡೆಯಾಗಿ ಮಾಡಿ ಅದನ್ನು ಪೂರಿಯ ತರ ರತ್ತೆಮಾಡಿ ಹೂರಣ ಒಂದೊಂದು ಚಮಚ ತುಂಬಿ ಅದನ್ನು ‘ಮೋದಕ’ ಆಕೃತಿ ಎಂದರೆ ಪಿರಮಿಡ್ ಆಕೃತಿಯಲ್ಲಿ ಲಾಕ್ ಮಾಡಿ, ಎಣ್ಣೆ ಅಥವಾ ತುಪ್ಪ ಬಿಸಿಮಾಡಿದ ಎಣ್ಣೆ ಬಾಣಲೆಯಲ್ಲಿ ಹದವಾಗಿ ಕರಿಯಿರಿ.
2. ಕರಿಗಡಬು:- ಇದಕ್ಕೂ ಸಹಾ ಮೇಲಿನ ಎಲ್ಲಾ ಸಾಮಗ್ರಿಗಳನ್ನು ಬಳಸಿ, ರತ್ತೆಯನ್ನು ಪೂರಿಯ ಸೈಜ್ ಗೆ ಮಾಡಿ, ಹೂರಣಹಾಕಿ ಒಂದು ಕಡೆ ಮಡಚಿ(ಉದ್ದಿನ ದೋಸೆ ಮಡಚಿದಂತೆ) ನಂತರ ಎರಡೂ ಮಡಿಕೆಗಳು ಪರಸ್ಪರ ಬರುತ್ತದೆ ಆಗ ಲಾಕ್ ಮಾಡಲು ಮೃದುವಾಗಿ ಒತ್ತಿ, ತುಪ್ಪ ಅಥವಾ ಎಣ್ಣೆಯಲ್ಲಿ ಕರಿಯಿರಿ.
3. ಪಂಚಕಜ್ಜಾಯ:- ಕಡಲೇಬೇಳೆ, ಸಕ್ಕರೆ, ಎಳ್ಳು, ಏಲಕ್ಕಿ.. ಒಂದು ಲೋಟ ಕಡಲೇ ಬೇಳೆ ಗರಿಗರಿಯಾಗಿ ಹುರಿಯಬೇಕು, ಮಿಕ್ಸಿಯಲ್ಲಿ ಪುಡಿಮಾಡಿ, ಪುಡಿಮಾಡೋವಾಗ ಅರ್ಧ ಲೋಟ ಸಕ್ಕರೆ, ಹುರಿದ ಕಡಲೇಬೇಳೆ, ಏಲಕ್ಕಿ ಹಾಕಿ ಮಿಕ್ಸರ್ ಲಿ ತರಿತರಿ ಪುಡಿಮಾಡಿ, ಅದಕ್ಕೆ ಎರಡು ಚಮಚ ಕರಿಎಳ್ಳು ಹುರಿದು ಹಾಕಿ, ಒಣಕೊಬ್ಬರಿ ತುರಿದು ಹಾಕಿ. (ಬೆಲ್ಲದ್ದೂ ಮಾಡಬಹುದು)
4. ತಂಬಿಟ್ಟು ಉಂಡೆ:- ಹೆಸರು ಬೇಳೆ, ಏಲಕ್ಕಿ, ಬೆಲ್ಲ, ಕಾಯಿತುರಿ.. ಹೆಸರು ಬೇಳೆ ಕೆಂಪಗೆ ಹುರಿಯಬೇಕು, ನಂತರ ಏಲಕ್ಕಿಯ ಜೊತೆಗೆ ಇದನ್ನು ಮಿಕ್ಸಿಲಿ ಪುಡಿಮಾಡಿ, ಆಮೇಲೆ ಎರಡು ಉಂಡೆ ಬೆಲ್ಲ ಏರು ಪಾಕ (ಲೋಟದಲ್ಲಿ ನೀರು ಇಟ್ಟು, ಅದಕ್ಕೆ ಒಂದು ಹನಿ ಈ ಪಾಕ ಬಿಟ್ಟಲ್ಲಿ ಉಂಡೆಕಟ್ಟಲು ಬರಬೇಕು), ನಂತರ ಆ ಹಿಟ್ಟನ್ನು ಈ ಪಾಕಕ್ಕೆ ಸೇರಿಸಿ, ತುಪ್ಪ ಎರಡು ಚಮಚ ಹಾಕಿ, ಕೊಬ್ಬರಿ ತುರಿ ಹಾಕಿ ಬಿಸಿಬಿಸಿ ಉಂಡೆಯಾಗಿ ಕಟ್ಟಬೇಕು.
6. ನೆಲಗಡಲೇ ಉಂಡೆ:- ಕಡಲೇ ಬೀಜ, ತುಪ್ಪ , ಬೆಲ್ಲ. – ಕಡಲೆ ಬೀಜ ಕೆಂಪಗೆ ಹುರಿದು, ಸಣ್ಣಗೆ ಪುಡಿಮಾಡಿ, ಬೆಲ್ಲದ ಪಾಕ ಮೇಲಿನ ತರ ಮಾಡಿ, ಏಲಕ್ಕಿ ಪುಡಿಯೊಂದಿಗೆ ಈ ಪಾಕಕ್ಕೆ ಮಿಕ್ಸ್ ಮಾಡಿ ಬಿಸಿಬಿಸಿ ಕಟ್ಟಬೇಕು.
7. ಗೇರು ಬೀಜದ ಉಂಡೆ:- ಗೇರುಬೀಜ, ತುಪ್ಪ, ಬೆಲ್ಲ, ಏಲಕ್ಕಿ ಪೌಡರ್. ಗೇರು ಬೀಜ ಸಣ್ಣ ಚೂರು ಮಾಡಿ, ನಂತರ ಶೇಂಗಾ ಉಂಡೆಯ ವಿಧಾನವನ್ನು ಪಾಲಿಸಬೇಕು.
8. ಎಳ್ಳು ಉಂಡೆ:- ಕರಿ ಅಥವಾ ಬಿಳಿ ಎಳ್ಳು, ಬೆಲ್ಲ, ಏಲಕ್ಕಿ ಪುಡಿ, ತುಪ್ಪ.. ಎಳ್ಳನ್ನು ಹುರಿದು ಅದು ಪಟಪಟ ಹೊಟ್ಟುತ್ತದೆ, ನಂತರ ಒಂದು ಕಲ್ಲಿನಿಂದ ಚೂರು ಜಜ್ಜಿದಲ್ಲಿ ಅದರ ಹೊಟ್ಟು ಹೋಗಿ ಶುಭ್ರವಾಗಿ ನಂತರ ಬೆಲ್ಲದ ಪಾಕಮಾಡಿ, ಅದಕ್ಕೆ ಈ ಎಳ್ಳು, ತುಪ್ಪ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಬಿಸಿಬಿಸಿ ಕಟ್ಟಬೇಕು.
ರಾಘವೇಂದ್ರ ಜಿ.ಜಿ, ವಾಣಿಜ್ಯ ಉಪನ್ಯಾಸಕರು, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು, ಕುಂಜಿಬೆಟ್ಟು, ಉಡುಪಿ