ಓದುಗರ ಮನದಾಳದ ಮಾತು ~ ಗಿರೀಶ್ ಐತಾಳ್ ಕರಂಬಳ್ಳಿ

ಯುವ ಜನಾಂಗ ಇಡೀ ದಿನ ಮೊಬೈಲ್ ಲೋಕದಲ್ಲಿಯೇ ಬಿದ್ದಿರುವಾಗ ಅದರ ಮೂಲಕವೇ ಅವರಿಗೆ ಆಗು -ಹೋಗುಗಳ ನೈಜ ಘಟನೆಗಳ ಸುದ್ದಿಯನ್ನು, ವಿವಿಧ ವಿಚಾರಗಳ ಅಂಕಣಗಳನ್ನು, ಹಲವಾರು ಛಾಯಾಚಿತ್ರಗಳನ್ನು ಬಿತ್ತರಿಸಿ ಒಂದು ವರ್ಷದೊಳಗೆ ಅನೇಕ ವೀಕ್ಷಕರನ್ನು ಸೆಳೆದ “ಕರಾವಳಿ ಎಕ್ಸ್ ಪ್ರೆಸ್” ಟೀಮ್ ಗೆ ಅಭಿನಂದನೆಗಳು.

ಬದಲಾಗುತ್ತಿರುವ ಜನರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ವಿಚಾರಗಳನ್ನು , ಆಕರ್ಷಿಣೀಯವಾಗಿ, ಒಂದು ಸಣ್ಣ ಲಿಂಕ್ ನ ಮೂಲಕ ಬಿತ್ತರಿಸುತ್ತಿರುವಿರಿ. ಹಾಗೆಯೇ, ಸುದ್ದಿ ಗಳನ್ನು ಬಿತ್ತರಿಸುವ ತುರಾತುರಿಯಲ್ಲಿ, ಪೈಪೋಟಿಯಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಬಿತ್ತರಿಸಿಸದೇ, ನೈಜ ಸುದ್ದಿಗಳನ್ನು ಬಿತ್ತರಿಸಿರುವಿರಿ. 
 
ಆರಂಭದಿಂದಲೂ ಕರಾವಳಿ ಎಕ್ಸ್ ಪ್ರೆಸ್ ವೆಬ್ ಸುದ್ದಿ ಜಾಲದ ಅಭಿಮಾನಿಯಾಗಿರುವೆನು. ಇನ್ನು ಮುಂದೆಯೂ ಹೊಸ ರೀತಿಯ ಬದಲಾವಣೆಗಳಾಗಿ ,ಇನ್ನಷ್ಟು ಹೊಸ ವೀಕ್ಷಕರು ನೋಡಿ ಮೆಚ್ಚಿ, ನಾಡಿನಾದ್ಯಂತ ವಿಖ್ಯಾತಿಯನ್ನು ಪಡೆಯಲಿ ಎಂದು ಹಾರೈಸುತ್ತೇನೆ.
 
 
 
 
 
 
 
 
 
 
 

Leave a Reply