ದೇಶದ ರಕ್ಷಣೆ ನಮ್ಮ ಜವಾಬ್ದಾರಿ – ಕೆ ವಿಜಯ್ ಕೊಡವೂರು

ಹಿಂದೂ ಸಮಾಜ ಬಲಿಷ್ಠವಾಗಬೇಕು ಹಿಂದೂ ಸಮಾಜ ಸಂಘಟಿತವಾಗಬೇಕು ಮತ್ತು ಹಿಂದೂ ಸಮಾಜ ಆರೋಗ್ಯ ಆರೋಗ್ಯವಂತವಾಗಬೇಕಾದರೆ ನಾವು ಸದಾ ಇಂತಹ ಕಾರಣಗಳನ್ನು ಇಟ್ಟುಕೊಂಡು ಸೇರುವಂತ ದಾಗಬೇಕು. ಸಮಾಜದ ಒಳಿತಿನ ಬಗ್ಗೆ ಈ ದೇಶದ ಒಳಿತಿನ ಬಗ್ಗೆ ಮಾಡುವಂತಗಿರಬೇಕು. ಎಂದು ಕೆ ವಿಜಯ ಕೊಡವೂರು ತಿಳಿಸಿದರು.ನಮ್ಮ ಸಮಾಜವನ್ನು ಒಂದು ಮಾಡುವ ರಕ್ಷಾಬಂಧನದಂತ ಕಾರ್ಯಕ್ರಮ ಅರ್ಥ ಪೂರ್ಣವಾಗಿದೆ ಅಣ್ಣ ತಂಗಿ ಯನ್ನು ರಕ್ಷಣೆ ಮಾಡುವುದು ಇದರ ಜೊತೆಗೆ ಸಮಾಜದ ರಕ್ಷಣೆಯನ್ನು ಮಾಡಬೇಕು ಎನ್ನುವ ಈ ಅರ್ಥಪೂರ್ಣ ವಾದ ಕಾರ್ಯಕ್ರಮವನ್ನು ನಮ್ಮ ಹಿರಿಯರು ನಮಗೆ ಕೊಟ್ಟು ಹೋಗಿದ್ದಾರೆ ಅದರಿಂದ ಇದನ್ನು ನಾವು ಮುಂದುವರಿ ಸಬೇಕು ಮುಂದುವರಿಸುತ್ತಾ ಸದಾ ಈ ದೇಶ ಧರ್ಮದ ಬಗ್ಗೆ ಯೋಚನೆ ಮಾಡಬೇಕು.

ಇಂತಹ ಕಾರ್ಯಕ್ರಮವನ್ನು ಕೊಡವೂರು ವಾರ್ಡ್ ನಲ್ಲಿ ಅನೇಕ ಕಡೆಗಳಲ್ಲಿ ಕಾರ್ಯಕರ್ತರು ಮಾಡಿದ್ದಾರೆ, ಈ ಕಾರ್ಯಕ್ರಮದಿಂದ ಸಮಾಜವನ್ನು ಸಂಘಟನೆ ಮಾಡಲು ಸಾಧ್ಯ ಎಂದು ವಿಜಯ್ ಕೊಡವೂರು ತಿಳಿಸಿದರು.

ಈ ಸಂದರ್ಭದಲ್ಲಿ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆಯ ಹೈಸ್ಕೂಲ್ ನ ಮುಖ್ಯೋಪಾಧ್ಯಾಯ ಆಗಿರುವ ಶಶಿಕುಮಾರ್,ಉದ್ಯಮಿ ಆಗಿರುವ ಪ್ರಕಾಶ್ ಕರ್ಕೇರ ಮತ್ತು ರಮೇಶ್ ಕೊಪ್ಪಲ್ ತೋಟ, ಉಪಸ್ಥಿತ ರಿದ್ದರು. ಅಜಿತ್ ಸೇನರಜಿಡ್ಡ ಸ್ವಾಗತಿಸಿ ಧನ್ಯವಾದಗಳು ತಿಳಿಸಿದರು.

 
 
 
 
 
 
 
 
 
 
 

Leave a Reply