ಓಂಕಾರೇಶ್ವರದಲ್ಲಿ ಪೇಜಾವರ ಶ್ರೀ

ಮಧ್ಯಪ್ರದೇಶ ರಾಜ್ಯದ ಓಂಕಾರೇಶ್ವರದಲ್ಲಿ ನಡೆಯುತ್ತಿರುವ ಪುಷ್ಕರ ಸ್ನಾನಮೇಳದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶನಿವಾರ ಭೇಟಿ ನೀಡಿ ನರ್ಮದಾ ನದೀ ಸ್ನಾನಗೈದರು .

ಆ ಬಳಿಕ ಇತ್ತೀಚೆಗಷ್ಟೆ ನಿರ್ಮಾಣಗೊಂಡಿರುವ ಆದಿಶಂಕರರ 108 ಅಡಿಯ ಏಕತಾ ಪ್ರತಿಮಾ ಸ್ಥಳಕ್ಕೂ ಭೇಟಿ ನೀಡಿದರು .

ಕಳೆದ ವರ್ಷ ಪ್ರತಿಮೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಅಲ್ಲಿನ ರಾಜ್ಯ ಸರ್ಕಾರ ಶ್ರೀಗಳಿಗೆ ಆಹ್ವಾನ ನೀಡಿತ್ತು . ಆದರೆ ಚಾತುರ್ಮಾಸ್ಯ ವ್ರತವಿದ್ದುದರಿಂದ ಶ್ರೀಗಳು ಭಾಗವಹಿಸಿರಲಿಲ್ಲ. ಶನಿವಾರ ಶ್ರೀಗಳ ಭೇಟಿಯ ಮಾಹಿತಿ ಪಡೆದ ಏಕತಾ ಪ್ರತಿಮೆ ಪ್ರಾಧಿಕಾರದ ಅಧಿಕಾರಿಗಳು ಶ್ರೀಗಳು ಸ್ಥಳವನ್ನು ಸಂದರ್ಶಿಸುವಂತೆ ವಿನಂತಿಸಿದ್ದರು . ಅದರಂತೆ ಶ್ರೀಗಳು ಸ್ಥಳಕ್ಕೆ ಭೇಟಿ ನೀಡಿದರು . ಪ್ರಾಧಿಕಾರದ ಅಧಿಕಾರಿಗಳಾದ ಡಾ ಶೈಲೇಂದ್ರ ಮಿಶ್ರಾ , ಶುಭಮ್ ಚೌಹಾಣ್ ಮತ್ತಿತರರು ಶ್ರೀಗಳನ್ನು ಆದರದಿಂದ ಬರಮಾಡಿಕೊಂಡು ಸ್ಥಳದ ಕುರಿತಾಗಿ ವಿವರಿಸಿದರು . ಶ್ರೀಗಳೊಂದಿಗೆ ಕೃಷ್ಣಭಟ್ , ಪವನ್ ಭಟ್ ಉಪಸ್ಥಿತರಿದ್ದರು .

 
 
 
 
 
 
 
 
 
 
 

Leave a Reply