ಮಂಗಳೂರು: ಆರು ತಿಂಗಳ ಹಿಂದೆ ಜನಿಸಿದ್ದ ತನ್ನ ಪುಟ್ಟ ಕಂದಮ್ಮನನ್ನು ಮೊದಲ ಬಾರಿಗೆ ನೋಡಬೇಕೆಂದ ಕನಸು ಈ ಯೋಧನ ಕಣ್ಣಲ್ಲಿ ತುಂಬಿ ತುಳುಕುತ್ತಿತ್ತು,.ಅದರ ಜೊತೆಯಲ್ಲಿ ತಾಯಿಯ ವಾರ್ಷಿಕ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿಯೂ ಭಾಗಿಯಾಗುವವರಿದ್ದರು. ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸಶಸ್ತ್ರ ಸೀಮಾ ಬಲ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಮುರುಳೀಧರ್ ನಾಳೆ ಊರಿಗೆ ಬರಬೇಕು ಎಂಬ ಮಹದಾಸೆಯೊಂದಿಗೆ ಮುರುಳೀದರ್ ರಾತ್ರಿ ಮಲಗಿದ್ದವರು ಬೆಳಗ್ಗೆ ಏಳಲೇ ಇಲ್ಲ.
ಜನವರಿ 22ರ ರಾತ್ರಿ ಪುತ್ರಿ ಹಾಗೂ ಪತ್ನಿ ಉಷಾರೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದ 37 ವರ್ಷದ ಹವಾಲ್ದಾರ್ ಬಳಿಕ ಮಲಗಿದ್ದರು. ಆದರೆ ಜನವರಿ 23ರ ಬೆಳಗ್ಗೆ ಅವರು ಎದ್ದಿರಲಿಲ್ಲ. ಮಧ್ಯ ಪ್ರದೇಶದ ಭೂಪಾಲ್ನಲ್ಲಿ ಹೆಚ್ಸಿ/ಜಿಡಿ ರ್ಯಾಂಕ್ ಹೊಂದ ಬಳಿಕ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದ ಮುರಳೀಧರ್ ರನ್ನು ಕೂಡಲೇ ವೈದ್ಯರು ತಪಾಸಣೆ ನಡೆಸಿ ನೋಡಿದಾಗ ಮುರುಳೀಧರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಇಂದು ಮೃತ ಮುರುಳೀಧರ್ ಪಾರ್ಥೀವ ಶರೀರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್, ಪ್ರಭಾರಿ ಮುಖ್ಯ ವಿಮಾನ ನಿಲ್ದಾಣ ಭದ್ರತಾ ಅಧಿಕಾರಿ ಕಿಶೋರ್ ಕುಮಾರ್ ಎವಿ ಮುರುಳೀಧರ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ. ನಾಳೆ ಶಕ್ತಿ ನಗರದಲ್ಲಿರುವ ಸೈನಿಕ ಭವನದಲ್ಲಿ ಹುತಾತ್ಮ ಯೋಧ ಮುರುಳೀಧರ್ ಅಂತಿಮ ಕ್ರಿಯೆ ನೆರವೇರಲಿದೆ.